ಬಂಟ್ವಾಳ

ಪ್ರವಾದಿ ಚರ್ಯೆ ದೈನಂದಿನ ಜೀವನದಲ್ಲಿ ಅಳವಡಿಕೆಯಾಗಲಿ: ಅಶ್ರಫ್ ಫೈಝಿ ಮಿತ್ತಬೈಲು

ಜಾಹೀರಾತು

ಬಿ.ಸಿ.ರೋಡ್ : ಪ್ರವಾದಿ ಚರ್ಯೆಯನ್ನು ದಿನನಿತ್ಯ ರೂಢಿಗೊಳಿಸಿ ಜೀವನ ಪಾವನಗೊಳಿಸಬೇಕು ಎಂದು ರಾಜ್ಯ ಫೈಝೀಸ್ ಪ್ರಧಾನ ಕಾರ್ಯದರ್ಶಿ ಮಿತ್ತಬೈಲು ಕೇಂದ್ರ ಮಸೀದಿ ಖತೀಬರಾದ ಅಶ್ರಫ್ ಫೈಝಿ ಕರೆ ನೀಡಿದರು.

ಜಾಹೀರಾತು

ರಾಜ್ಯ ಫೈಝೀಸ್ ವತಿಯಿಂದ ರಾಜ್ಯಾದ್ಯಂತ ನಡಯುತ್ತಿರುವ ರಬೀಹ್ ಕ್ಯಾಂಪೈನ್-20 ರ ಅಂಗವಾಗಿ ಸಜಿಪ ಕೇಂದ್ರ ಮಸೀದಿಯಲ್ಲಿ ನಡೆದ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದರು. ಅವರು  ಪ್ರತಿಯೊಬ್ಬ ಮುಸಲ್ಮಾನನು ಪ್ರವಾದಿಯವರು ಕಲಿಸಿದ ಶಿಷ್ಟಾಚಾರಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದ ಮದ್ಯೆ ಶಾಂತಿ ಸಾಹೋದರತೆಯನ್ನು ಕಾಪಾಡುವುದು ಅನಿವಾರ್ಯವಾಗಿದೆ ಎಂದರು.  ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ಖತೀಬರಾದ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಮಾತನಾಡಿ ರಾಜ್ಯ ಫೈಝೀಸ್ ಹಮ್ಮಿಗೊಂಡ ಕಾರ್ಯಕ್ರಮ ಶ್ಲಾಘನೀಯವಾಗಿದ್ದು ಸಮೂಹದ ಸ್ಪಂದನ ಹಾಗೂ ಪ್ರೋತ್ಸಾಹ ಲಭಿಸುತ್ತಿದೆ. ಎಂದು ಅಭಿಪ್ರಾಯ ಪಟ್ಟರು. ಸಜಿಪ  ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು.  ಸಮಾರಂಭದಲ್ಲಿ ಲತೀಫ್ ಮುಸ್ಲಿಯಾರ್, ಎಸ್.ಕೆ.ಮುಹಮ್ಮದ್,  ಆಸಿಫ್ ಕುನಿಲ್, ಕರೀಂ ಹಾಜಿ, ಹಂಝ ದಾರಿಮಿ, ಅಬೂಬಕ್ಕರ್ ಫೈಝಿ ಬೈಲುಗುತ್ತು ಮೊದಲಾದವರು ಉಪಸ್ಥಿತರಿದ್ದರು. ಸಜಿಪ ರೇಂಜ್ ಅಧ್ಯಕ್ಷರಾದ ಫಳುಲುದ್ದೀನ್ ಮುಸ್ಲಿಯಾರ್ ಸ್ವಾಗತಿಸಿ,ವಂದಿಸಿದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ