ಬಂಟ್ವಾಳ

ನಡೆಯಿತು ಬಿ.ಸಿ.ROAD ಹೊಂಡ ಮುಚ್ಚುವ ಕಾರ್ಯ, ಶಾಶ್ವತ ಪರಿಹಾರ ಬೇಕು – ಜನರ ಒತ್ತಾಯ

ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡಿನ  ಪ್ರಮುಖ ರಸ್ತೆಯಲ್ಲಿ ಖಾಸಗಿ ಬಸ್ ತಂಗುದಾಣದವರೆಗಿನ ರಸ್ತೆ ಹೊಂಡದಿಂದ ಕೂಡಿದ್ದು, ಶಾಶ್ವತ ಪರಿಹಾರಕ್ಕಾಗಿ ಪ್ರಯಾಣಿಕರು ಕಾಯುತ್ತಿದ್ದಾರೆ ಎಂಬ ಆಗಸ್ಟ್ 11ರಂದು ಪ್ರಸಾರವಾದ ಬಂಟ್ವಾಳನ್ಯೂಸ್ ವರದಿಗೆ ಸ್ಪಂದನೆ ದೊರಕಿದೆ, ಶುಕ್ರವಾರ ಹೊಂಡಗಳು ಇದ್ದ ಜಾಗದಲ್ಲಿ ತೇಪೆ ಹಚ್ಚುವ ಕಾರ್ಯ ನಡೆಯಿತು. ಬಂಟ್ವಾಳನ್ಯೂಸ್ ನಲ್ಲಿ ವರದಿಯ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿರಿ

ಅದೋ ನೋಡಿ, ಮತ್ತೆ ಅದೇ ಜಾಗದಲ್ಲಿ ಬಿ.ಸಿ.ROAD ನಲ್ಲಿ ದೊಡ್ಡ ದೊಡ್ಡ ಹೊಂಡ!!

ಜಾಹೀರಾತು

 

ಜಾಹೀರಾತು

ಶುಕ್ರವಾರ ಬಿ.ಸಿ.ರೋಡಿನಲ್ಲಿರುವ ರಸ್ತೆ ಹೊಂಡಗಳಿಗೆ ತೇಪೆ ಹಚ್ಚುವ ಕಾರ್ಯ ನಡೆಯಿತು.

ಜಾಹೀರಾತು

ಆದರೆ ಆಗಾಗ್ಗೆ ಇಲ್ಲಿ ತೇಪೆ ಕಾರ್ಯವನ್ನು ಸ್ಥಳೀಯರು ಮಾಡುತ್ತಿದ್ದರೂ ಮತ್ತೆ ಕಿತ್ತು ಹೋಗುವ ಹೊಂಡಗಳು ಸವಾಲಾಗಿ ಪರಿಣಮಿಸಿವೆ. ಹಲವು ವರ್ಷಗಳಿಂದ ಅದೇ ಜಾಗದಲ್ಲಿ ಹೊಂಡಗಳು ಉದ್ಭವವಾಗುತ್ತಿರುವುದು ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಕೆಣಕುತ್ತಿವೆ. ದ್ವಿಚಕ್ರ, ಘನ ವಾಹನಗಳ ಸುಗಮ ಸಂಚಾರಕ್ಕೂ ಇದು ತೊಡಕಾಗಿದೆ. ಸಾಲದು ಎಂಬಂತೆ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನಿಂತು ಕೆರೆಯಂತಾಗುತ್ತಿದ್ದು, ವಾಹನಗಳ ಓಡಾಟಕ್ಕೆ ಪ್ರಯಾಣಿಕರು ಒದ್ದೆಯಾಗಬೇಕಾಗುತ್ತದೆ. ಧಾರಾಕಾರ ಮಳೆಯ ಸಂದರ್ಭ ಮೇಲ್ಸ್ ತುವೆಯ ಮೇಲ್ಬಾಗದಿಂದ ನೀರು ರಸ್ತೆಗೆ ಸುರಿದು ಅಭಿಷೇಕ ಮಾಡುವಂತೆ ಭಾಸವಾಗುತ್ತಿದೆ. ಇದರ ಮೂಲ ಸಮಸ್ಯೆ ಕಂಡುಹಿಡಿದು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

 

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.