ವಾಮದಪದವಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಎನ್ನೆಸ್ಸೆಸ್ ಪರಿಸರ ಸಂಘ, ಯುವ ರೆಡ್ ಕ್ರಾಸ್ ಘಟಕ, ರೋವರ್ಸ್, ರೇಂಜರ್ಸ್ ಆಶ್ರಯದಲ್ಲಿ ಕಾಲೇಜು ವಠಾರದಲ್ಲಿ ಗಿಡ ನೆಡಲಾಯಿತು. ಪ್ರಾಂಶುಪಾಲ ಪ್ರೊ. ಹರಿಪ್ರಸಾದ್ ಶೆಟ್ಟಿ, ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ, ಡಾ. ಮೇರಿ ಎಂ.ಜೆ, ಡಾ. ರವಿ ಎಂ.ಎನ್, ಪ್ರೊ. ಅನಿಲ್ ಕುಮಾರ್ ಇದ್ದರು. ಕಚೇರಿ ಸಹಾಯಕಿ ಸುಮಾ ಗಿಡ ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಿದರು.