ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ನೇತೃತ್ವದ ಕಂದಾಯ ಇಲಾಖೆಯ ತಂಡ ಶನಿವಾರ ಬಂಟ್ವಾಳ ತಾಲೂಕಿನಲ್ಲಿರುವ ವಿವಿಧೆಡೆಗೆ ಭೇಟಿ ನೀಡಿ ಕ್ವಾರಂಟೈನ್ನಲ್ಲಿರುವ ಕುರಿತು ಪರಿಶೀಲನೆ ನಡೆಸಿತು.
ಪುದು ಹಾಗೂ ಸಜೀಪಪಡು ಗ್ರಾಮದಲ್ಲಿ ಹೋಮ್ ಕ್ವಾರಂಟೈನ್ನಲ್ಲಿರುವವರ ಮನೆಯ ಬಳಿಗೆ ತೆರಳಿ ಅಲ್ಲಿನ ಸ್ಟಿಕ್ಕರಿಂಗ್ ಕುರಿತು ಪರಿಶೀಲಿಸಲಾಯಿತು. ಜತೆಗೆ ಮೊಗರ್ನಾಡುನಲ್ಲಿರುವ ಸರಕಾರಿ ಕ್ವಾರಂಟೈನ್ ವ್ಯವಸ್ಥೆಯ ಕುರಿತು ಪರಿಶೀಲಿಸಿದರು.ಅಪರ ಜಿಲ್ಲಾಧಿಕಾರಿ ರೂಪ ಎಂ.ಜೆ, ಮಂಗಳೂರು ಸಹಾಯಕ ಕಮೀಷನರ್ ಮದನ್ಮೋಹನ್ ಸಿ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ನವೀನ್ ಕುಮಾರ್ ಮೊದಲಾದವರಿದ್ದರು. ಪುದು ಗ್ರಾಮದ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪಿಡಿಒ ಆನಂದ್, ವಿಎ ನವ್ಯಾ ಮೊದಲಾದವರಿದ್ದರು.