ಬಂಟ್ವಾಳ

ಭತ್ತದ ಬಿತ್ತನೆ ಬೀಜ ದಾಸ್ತಾನು ಲಭ್ಯತೆ: ಕೃಷಿ ಇಲಾಖೆ ಪ್ರಕಟಣೆ ಹೀಗಿದೆ

2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿ ಬಂಟ್ವಾಳ ತಾಲೂಕಿನ 3 ರೈತ ಸಂಪರ್ಕ ಕೇಂದ್ರಗಳಾದ ಬಂಟ್ವಾಳ ಕಸಬಾ, ಪಾಣೆಮಂಗಳೂರು ಮತ್ತು ವಿಟ್ಲದಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಲಭ್ಯವಿದೆ.

ಜಾಹೀರಾತು

ಬಂಟ್ವಾಳ ಕಸಬಾ ಕೇಂದ್ರದಲ್ಲಿ ಎಂಒ4 (ಭದ್ರಾ) 45 ಕ್ವಿಂಟಾಲ್, ಜಯ 10 ಕ್ವಿಂಟಾಲ್ ಇದೆ. ಪಾಣೆಮಂಗಳೂರು ಕೇಂದ್ರದಲ್ಲಿ ಎಂಒ4 (ಭದ್ರಾ) 40 ಕ್ವಿಂಟಲ್, ಜಯ 10 ಕ್ವಿಂಟಲ್ ಇದೆ. ವಿಟ್ಲ ಕೇಂದ್ರದಲ್ಲಿ ಎಂಒ4 (ಭದ್ರಾ) 20 ಕ್ವಿಂಟಲ್, ಜಯ 5 ಕ್ವಿಂಟಲ್ ಮತ್ತು ಜ್ಯೋತಿ 5 ಕ್ವಿಂಟಲ್ ಇದೆ. ಎಂಒ4(ಭದ್ರಾ) ತಳಿಗೆ ಕೆಜಿಗೆ 32 ರೂ, ಜಯ ತಳಿಗೆ ಕೆಜಿಗೆ 28.5 ರೂ, ಜ್ಯೋತಿ ತಳಿಗೆ ಕೆಜಿಗೆ 38 ರೂ ನಿಗದಿಯಾಗಿದೆ. ಪ.ಜಾತಿ, ಪಂಗಡ ರೈತರಿಗೆ ಕೆಜಿಗೆ 12 ರೂ, ಇತರ ರೈತರಿಗೆ ಕೆಜಿಗೆ 8 ರೂ ಸಹಾಯಧನ ಲಭ್ಯ. ಎಕರೆಗೆ 25 ಕೆಜಿಯಂತೆ ಗರಿಷ್ಠ ಒಬ್ಬ ರೈತರಿಗೆ 5 ಎಕರೆಗೆ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತದೆ. ರೈತರು ತಮ್ಮ ಜಮೀನಿನ ಪಹಣಿ ಪತ್ರ, ಆಧಾರ್, ಬ್ಯಾಂಕ್ ಖಾತೆ ವಿವರ ಸಲ್ಲಿಸಿ, ಸಹಾಯಧನದಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಬಹುದು ಎಂದು ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ