ಕೊರೊನಾ ಹಿನ್ನೆಲೆಯಲ್ಲಿ ಮನೆ ಮನೆ ಭೇಟಿ ನೀಡಿ ತಮ್ಮ ಕರ್ತವ್ಯ ಸಲ್ಲಿಸುತ್ತಿರುವ ಬಂಟ್ವಾಳ ತಾಲೂಕಿನ 351 ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್ ಅನ್ನು ವಿತರಿಸುವ ಕಾರ್ಯವನ್ನು ಶಾಸಕ ರಾಜೇಶ್ ನಾಯ್ಕ್ ಅವರು ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ 41 ಪೌರಕಾರ್ಮಿಕರಿಗೆ ಅವರು ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್ ವಿತರಿಸಿ, ಆರೋಗ್ಯ ತಪಾಸಣೆ ಮಾಡಿಸಿದ್ದರು. ಇದಲ್ಲದೆ ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯ ಪೌರಕಾರ್ಮಿಕರಿಗೂ ಆಹಾರ ಕಿಟ್ ವಿತರಿಸಲಾಗುವುದು ಎಂದವರು ತಿಳಿಸಿದ್ದಾರೆ. ಇದಕ್ಕಾಗಿ ತಂಡವನ್ನು ಅವರು ಸಿದ್ಧಪಡಿಸಿದ್ದು, ತಾಲೂಕಿನ ಪ್ರತಿ ಆರೋಗ್ಯ ಕೇಂದ್ರಗಳಿಗೆ ತೆರಳಿ ಆಯಾ ಭಾಗದ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು. ಈ ಹಿನ್ನೆಲೆಯಲ್ಲಿ ಶನಿವಾರ ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ನೇತೃತ್ವದಲ್ಲಿ ರಾಯಿ, ವಾಮದಪದವು, ಪುಂಜಾಲಕಟ್ಟೆ, ದೈವಸ್ಥಳ, ನಾವೂರ, ಪಂಜಿಕಲ್ಲು ಕಡೆಗಳಲ್ಲಿ ಕಿಟ್ ವಿತರಿಸಲಾಯಿತು. ಸೋಮವಾರ ಉಳಿದೆಡೆ ವಿತರಿಸಲಾಗುತ್ತದೆ ಎಂದು ದೇವದಾಸ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರ ನೇತೃತ್ವದಲ್ಲಿ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೧, ವಾಮದಪದವುನಲ್ಲಿ ೧೧, ಪುಂಜಾಲಕಟ್ಟೆಯಲ್ಲಿ ೨೨, ದೈವಸ್ಥಳ ೧೫, ನಾವೂರ ೬, ಪಂಜಿಕಲ್ಲು ೧೩ ಸೇರಿ ಒಟ್ಟು ೭೮ ಮಂದಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ವಿತರಿಸಲಾಯಿತು.
ಆಶಾ ಕಾರ್ಯಕರ್ತೆಯರಿಗೆ ಅಕ್ಕಿ ವಿತರಣೆಯ ಸಂಧರ್ಭದಲ್ಲಿ ದೇವದಾಸ್ ಶೆಟ್ಟಿಯವರ ಜತೆ ಸ್ಥಳೀಯರಾದ ದಯಾನಂದ ಸಪಲ್ಯ, ಹರೀಶ್ ಆಚಾರ್ಯ, ಪರಮೇಶ್ವರ ಪೂಜಾರಿ, ಸಂತೋಷ್ ಕುಮಾರ್, ಪುರುಷೋತ್ತಮ ಶೆಟ್ಟಿ, ದಿನೇಶ್ ದಂಬೆ,ಸಂತೋಷ್ ಜೈನ್, ಶ್ರೇಯಸ್, ಪ್ರಭಾಕರ ಶೆಟ್ಟಿ, ಪ್ರಣಾಥ್, ಡಾ.ಉಮೇಶ್ ಅಡ್ಯಂತಾಯ, ರಾಮಕೃಷ್ಣ ಮಯ್ಯ, ಚಿದಾನಂದ ರೈ, ಪ್ರಕಾಶ್ ಅಂಚನ್, ಚಿದಾನಂದ ಕುಲಾಲ್, ಕೇಶವ,ಮೋಹನ್ ದಾಸ್, ಕೇಶವ ಲೂಜಂತೋಡಿ ಮುಂತಾದವರು ಉಪಸ್ಥಿತರಿದ್ದರು
(more…)