ಬಂಟ್ವಾಳ

ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಆತ್ಮಹತ್ಯಾ ತಡೆ ದಿನಾಚರಣೆ

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚಿನಲ್ಲಿ ಆತ್ಮಹತ್ಯಾ ತಡೆ ಅಭಿಯಾನ ದಿನವನ್ನು ಆಚರಿಸಲಾಯಿತು. ಸೂರಿಕುಮೇರು ಬರಿಮಾರ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾ ಬಲಿಪೂಜೆ ನಡೆಸಿ, ಆತ್ಮಹತ್ಯೆ ಮಾಡುವುದನ್ನು ವಿರೋಧಿಸೋಣ, ಜೀವನವೆಂಬುದು ದೇವರು ನಮಗೆ ಕೊಟ್ಟ ಸುಂದರ ವರವಾಗಿದ್ದು, ಎಲ್ಲರೂ ದೇವರ ಮೇಲೆ ಈ ವಿಶ್ವಾಸವನ್ನಿಟ್ಟು ಕೊನೆ ಉಸಿರು ದೇವರು ಕೊಂಡು ಹೋಗುವ ತನಕ ಒಳ್ಳೆಯ ಜೀವನ ನಡೆಸುವಂತೆ ಕರೆ ನೀಡಿದರು.

ಜಾಹೀರಾತು

ಬಲಿಪೂಜೆ ಬಳಿಕ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ ಪೀಟರ್ ಪಾವ್ಲ್ ಸಲ್ಡಾನ್ಹಾ ನಿರ್ದೇಶನದಂತೆ ವಂದನೀಯ ಫಾದರ್ ಗ್ರೆಗರಿ ಪಿರೇರಾ ಎಲ್ಲರಿಗೂ ನಾನು ಆತ್ಮಹತ್ಯೆ ಮಾಡುವುದಿಲ್ಲ ಎಂಬ ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು.

ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಎಲಿಯಾಸ್ ಪಿರೇರಾ ಮಾತನಾಡಿ, ಆತ್ಮಹತ್ಯೆ ಮಾಡುವುದರಿಂದ ಇಡೀ ಕುಟುಂಬಕ್ಕೆ ಅವಮಾನ ಮಾತ್ರವಲ್ಲದೆ ಉಳಿದವರೆಲ್ಲರೂ ಜೀವಮಾನವಿಡೀ ಕೊರಗುವುದರಿಂದಲೇ ದಿನವನ್ನು ಕಳೆಯಬೇಕು. ಇದರಿಂದ ನಾವು ದೂರ ಇರುವಂತೆ ಕರೆನೀಡಿದರು. ಜೀವನ್ ನಿಲಯ ಕಾನ್ವೆಂಟಿನ ಶ್ರೇಷ್ಠ ಧರ್ಮ ಭಗಿನಿ ಸಹೋದರಿ ನ್ಯಾನ್ಸಿ ಮಾತನಾಡಿ, ಯುವ ಜನರಿಗೆ ಆತ್ಮಹತ್ಯೆ ಮಾಡದಂತೆ ಕರೆ ನೀಡಿದರು. ನೆರೆದ ಎಲ್ಲರೂ ಆತ್ಮಹತ್ಯೆ ವಿರುದ್ಧವಾಗಿ ಹಳದಿ ಬಣ್ಣದ ರಿಬ್ಬನ್ನನ್ನು ಬಟ್ಟೆಗೆ ಹಚ್ಚುವ ಮುಖಾಂತರ ಆತ್ಮಹತ್ಯಾ ತಡೆ ಅಭಿಯಾನ ದಿನಾಚರಣೆಯಲ್ಲಿ ಪಾಲ್ಗೊಂಡರು. ಪಾಲನಾ ಸಮಿತಿಯ ಕಾರ್ಯದರ್ಶಿ ಮೇರಿ ಡಿಸೋಜ ವಂದಿಸಿದರು. ಆಲಿಫಿಯಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ