ಮೆಲ್ಕಾರ್ ಗಾಯತ್ರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ವಿಷ್ಣು ಭಟ್ ಅಡ್ವೈ ಹಾಗೂ ಉಪಾಧ್ಯಕ್ಷರಾಗಿ ಮೋಹನ್ ಆಚಾರ್ಯ ಕಾರಿಂಜಬೈಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೊಸೈಟಿಯ ಕಚೇರಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಬೆಳ್ತಂಗಡಿ ತಾ.ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕರಾದ ಗಣಪತಿ ಸೋಮಯಾಜಿ, ಜಯಶಂಕರ ಬಾಸ್ರಿತ್ತಾಯ, ಲಕ್ಷ್ಮೀನಾರಾಯಣ ಉಡುಪ,ರಾಜಾರಾಮ ಭಟ್ ಟಿ.ಜಿ., ನಾಗರಾಜ ಭಟ್ ಪಿ., ಪ್ರಭಾಕರ ರಾವ್ ಕೆ., ರಾಜಾರಾಮ ಐತಾಳ್, ಶಾರದ ಎಸ್.ರಾವ್, ಕಲಾವತಿ ಅವರು ಉಪಸ್ಥಿತರಿದ್ದರು. ಸೊಸೈಟಿಯ ಸಿಬಂದಿಗಳು ಸಹಕರಿಸಿದ್ದರು. ಸೊಸೈಟಿಗೆ ಎಲ್ಲಾ ನಿರ್ದೇಶಕರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
(more…)