ಬಂಟ್ವಾಳ

ಗೆಳೆಯರು ಹೊಡೆಯುತ್ತಾರೆ ಎಂದು ಮನೆ ಬಿಟ್ಟ ಬಾಲಕ

ಶಾಲೆಯಲ್ಲಿ ಗೆಳೆಯರು ಹೊಡೆಯುತ್ತಾರೆ ಎಂಬ ನೆಪವೊಡ್ಡಿ ಎರಡು ದಿನಗಳ ಹಿಂದೆ ರಾಮನಗರದಿಂದ ತಪ್ಪಿಸಿಕೊಂಡು ಬಂದ  ಬಾಲಕನೊಬ್ಬ ಬುಧವಾರ ಮೆಲ್ಕಾರ್ ನಲ್ಲಿ ಪತ್ತೆಯಾಗಿ ಬಳಿಕ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರ ಸಮ್ಮುಖದಲ್ಲಿ ಪೋಷಕರೊಂದಿಗೆ ತೆರಳಿದ್ದಾನೆ.

ಮನೆಯಿಂದ ತಪ್ಪಿಸಿದ್ದ ಬಾಲಕ ರಾಮನಗರದಿಂದ ರೈಲಿನಲ್ಲಿ ಬಂದಿದ್ದು, ಅಲ್ಲಿ ಆತನಿಗೆ ಕನಕಪುರ ನಿವಾಸಿ ಅಯ್ಯಪ್ಪ ಮಾಲಾಧಾರಿ ಸ್ವಾಮಿ ಸಿದ್ದರಾಮು ಅವರ ಪರಿಚಯವಾಗಿ ಬಳಿಕ ಅವರ ಬೆನ್ನ ಹಿಂದೆಯೇ ಬಂದು ಮೆಲ್ಕಾರ್ ನಲ್ಲಿ ಪತ್ತೆಯಾಗಿದ್ದಾನೆ. ಸ್ವಾಮಿಗಳು ಧರ್ಮಸ್ಥಳ ಹೋಗುವ ಉದ್ದೇಶದಿಂದ ಬಿ.ಸಿ.ರೋಡು ಇಳಿದು ಮೆಲ್ಕಾರ್ ಕಡೆಗೆ ಹೋಗುತ್ತಿದ್ದರು.

ಜಾಹೀರಾತು

ತನ್ನ ಹಿಂದೆ ಬರಬೇಡ ಎಂದು ಹೇಳಿದರೂ ಕೇಳದೆ ಹಿಂದಿನಿಂದ ಹೋಗುತ್ತಿದ್ದ ವಿಚಾರ ಮೆಲ್ಕಾರ್ ನಲ್ಲಿದ್ದ ಪುರಸಭೆ ಪೌರ ಕಾರ್ಮಿಕರಿಗೆ ತಿಳಿದು ಅವರು, ಮಾನವ ಹಕ್ಕುಗಳ ಸಂರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷ ಇಕ್ಬಾಲ್ ಅವರಿಗೆ ತಿಳಿಸಿದ್ದಾರೆ. ಇಕ್ಬಾಲ್ ಅವರು ತಮ್ಮ ಸಂಘಟನೆ ಹಾಗೂ ಇತರ ಸಂಘಟನೆಗಳ ಮೂಲಕ ರಾಮನಗರದಲ್ಲಿದ್ದ ಬಾಲಕನ ಪೋಷಕರನ್ನು ಪತ್ತೆಹಚ್ಚಿ ವಿಚಾರವನ್ನು ತಿಳಿಸಿದ್ದು, ಬಿ.ಸಿ.ರೋಡು ಬರುವಂತೆ ಹೇಳಿದ್ದಾರೆ. ರಾತ್ರಿ ಪೊಲೀಸ್ ಠಾಣೆಯಲ್ಲಿ ಬಾಲಕನನ್ನು ಪೋಷಕರಿಗೆ ಒಪ್ಪಿಸಲಾಯಿತು. ಮಾನವ ಹಕ್ಕುಜಗಳ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಇಕ್ಬಾಲ್ ಅವರು ಈ ಹಿಂದೆ ರಸ್ತೆ ಬದಿಯಲ್ಲಿದ್ದ ಮಾನಸಿಕ ಅಸ್ವಸ್ಥನನ್ನು ಸುರಕ್ಷಿತವಾಗಿ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ