ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದ್ದು, ದೇಶ, ವಿದೇಶಗಳಲ್ಲಿನ ಶ್ರದ್ಧಾಳುಗಳು ಹಾಗೂ ಪ್ರವಾಸಿಗರನ್ನು ಇದು ಸೆಳೆಯಲಿದೆ. ಸುಮಾರು 72 ಎಕರೆ ವಿಸ್ತಾರವಾದ ಜಾಗದಲ್ಲಿ ನಿರ್ಮಾಣಗೊಳ್ಳುವ ಮಂದಿರ ಭಾರತೀಯ ರಾಮಭಕ್ತರ ಶ್ರದ್ಧಾಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಆರ್.ಎಸ್.ಎಸ್. ಮುಖಂಡ, ರಾಮಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ಮುಖ್ಯಸ್ಥ ರಮೇಶ್ ಕಲ್ಲಡ್ಕ ಅವರು ಫೈಬರ್ ನಲ್ಲಿ ರಚಿಸಿದ ಭವ್ಯ ರಾಮಮಂದಿರದ ಕಲಾಕೃತಿಯನ್ನು ಕಲ್ಲಡ್ಕದಲ್ಲಿ ಗುರುವಾರ ಸಂಜೆ ಅನಾವರಣಗೊಳಿಸಿ ಮಾತನಾಡಿದ ಡಾ. ಭಟ್, ರಾಮಮಂದಿರ ನಿರ್ಮಾಣವಾಗುವ ವಿಚಾರದಲ್ಲಿ ಎಲ್ಲ ಅಡೆತಡೆಗಳು ದೂರವಾದದ್ದು ಸಂತಸದ ವಿಚಾರ ಎಂದರು.
ಈ ಸಂದರ್ಭ ರಮೇಶ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಕಾಲೇಜು ಪ್ರಿನ್ಸಿಪಾಲ್ ಕೃಷ್ಣಪ್ರಸಾದ ಕಾಯರಕಟ್ಟೆ, ಕುಶಾಲಪ್ಪ ಅಮ್ಟೂರು ಇದ್ದರು.