ಬಂಟ್ವಾಳ

ಶಿಕ್ಷಕರು ಮೀಟಿಂಗ್, ಕಾಂಪಟೀಶನ್ ಗೆಂದು ಹೋದರೆ, ಪಾಠ ಮಾಡೋವ್ರು ಯಾರು?

ಬಂಟ್ವಾಳ ತಾಲೂಕು ಮುಖ್ಯೋಪಾಧ್ಯಾಯರೊಂದಿಗಿನ ಸಭೆಯಲ್ಲಿ ಪ್ರಶ್ನೆ

ಬಂಟ್ವಾಳ: ಶಿಕ್ಷಕರು ಮೀಟಿಂಗ್, ಕಾಂಪಟೀಶನ್ ಗೆಂದು ಹೋದರೆ, ಪಾಠ ಮಾಡೋವ್ರು ಯಾರು? ಪಾಠ ಹೇಳುವುದರಲ್ಲಿ ನಿರಂತರತೆಯನ್ನು ಕಾಯ್ದುಗೊಳ್ಳದೇ ಇದ್ದರೆ ಉತ್ತಮ ಫಲಿತಾಂಶ ದೊರೆಯುವುದು ಹೇಗೆ ಎಂಬ ಸಮಸ್ಯೆಯನ್ನು ಮುಖ್ಯೋಪಾಧ್ಯಾಯರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಲ್ಲಿ ಸೋಮವಾರ ಮಂಡಿಸಿದರು.

ಜಾಹೀರಾತು

ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮುಖ್ಯೋಪಾಧ್ಯಾಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಹಲವು ವಿಚಾರಗಳು ಚರ್ಚೆಗೊಳಗಾದವು.

ಬಂಟ್ವಾಳ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉಳಿದ ತಾಲೂಕುಗಳಿಗಿಂತ ಕಡಿಮೆಯಾಗಿರುವ ಕಾರಣ ಇದನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಸಲಹೆಗಳನ್ನು ಶಾಸಕರು ಕೇಳಿದಾಗ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ವಿವರಿಸಿದರು.

ಜಾಹೀರಾತು

ಶಾಲೆಯಲ್ಲಿ ಸಭೆ ಕರೆದರೆ, ಹೆತ್ತವರೇ ಬರುವುದಿಲ್ಲ. 8ನೇ ತರಗತಿಗೆ ಬರುವ ಮಕ್ಕಳಲ್ಲಿ ಕಾಗುಣಿತ ಬರದವರೇ ಜಾಸ್ತಿ. ಹೆಡ್ಮಾಸ್ಟರ್ ಕೆಲವೊಮ್ಮೆ ಅಟೆಂಡರ್ ಕೆಲಸವನ್ನು ಮಾಡಬೇಕಾಗುತ್ತದೆ. ಮೀಟಿಂಗುಗಳನ್ನು ಕಡಿಮೆ ಮಾಡಿ, ಸುತ್ತೋಲೆಗಳಲ್ಲೇ ಹೇಳಬೇಕಾದ್ದನ್ನು ತಿಳಿಸಿದರೆ ಶಾಲೆ ಬಿಟ್ಟು ಹೊರಗೆ ಹೋಗುವುದು ತಪ್ಪುತ್ತದೆ ಹೀಗೆ ಹಲವು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.

ಶಾಲೆಗಳಿಗೆ ಮೂಲಸೌಕರ್ಯ ಕೊರತೆ ಇದ್ದುದರ ಪಟ್ಟಿ ಮಾಡಿ, ತನ್ನ ಹಾಗೂ ಸಿಎಸ್ ಆರ್ ನಿಧಿಗಳ ನೆರವಿನಿಂದ ಒದಗಿಸಲು ಪ್ರಯತ್ನಿಸುವೆ ಎಂದ ಶಾಸಕ ರಾಜೇಶ್ ನಾಯ್ಕ್, ಶಿಕ್ಷಕರು ಮಂಡಿಸಿದ ಸಮಸ್ಯೆಗಳು ಗಂಭೀರವೂ ಆಗಿದ್ದು, ಇವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಮನಕ್ಕೆ ತರಲಾಗುವುದು ಎಂದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಹೈಸ್ಕೂಲ್ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಮತ್ತಿತರರು ವಿಚಾರ ಮಂಡಿಸಿದರು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕ್ಷೇತ್ರ ಸಂಪನ್ಮೂಲ ಸಮಯನ್ವಧಿಕಾರಿ ರಾಧಾಕೃಷ್ಣ ಭಟ್, ಶಿಕ್ಷಣ ಇಲಾಖಾಧಿಕಾರಿ ಸುಶೀಲಾ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಜಾಹೀರಾತು

www.bantwalnews.com Editor: Harish Mambady

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ