ಬಂಟ್ವಾಳ

ಮಳೆಯಿಂದ ನಿಲ್ಲದ ಭೀತಿ, ಶಾಸಕರಿಂದ ಸಂತ್ರಸ್ತರ ಭೇಟಿ, ನೇತ್ರಾವತಿ ಮಟ್ಟ 10.95

ಶುಕ್ರವಾರ ರಾತ್ರಿ ನೇತ್ರಾವತಿ ನದಿ ನೀರಿನ ಮಟ್ಟ ಏರುತ್ತಿದ್ದಂತೆ ತೀರ ಪ್ರದೇಶದಲ್ಲಿ ಅಪಾಯ ತಲೆದೋರಿದೆ. ರಾತ್ರಿ 11ರ ವೇಳೆ ನದಿ ನೀರಿನ ಮಟ್ಟ 10.95 mtrರಷ್ಟಾಗಿದ್ದು, ಮತ್ತಷ್ಟು ಏರಿಕೆಯ ಭೀತಿ ಇದೆ.

ಜಾಹೀರಾತು

ಬಂಟ್ವಾಳದ ನೆರೆ ಪೀಡಿತ ಪ್ರದೇಶಗಳಾದ ಬಡ್ಡಕಟ್ಟೆ , ಕೊಟ್ರಮಣಗಂಡಿ, ನಂದರಬೆಟ್ಟು, ತಲಪಾಡಿ, ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಮತ್ತು ತಂಡ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನೆರವಾದರು. ವಿಪತ್ತು ನಿರ್ವಹಣಾ ತಂಡದೊಂದಿಗೆ ತೆರಳಿದ ಶಾಸಕರು, ಸಂತ್ರಸ್ತರಿಗೆ ಸುರಕ್ಷಿತ ಜಾಗದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ.

ನೇತ್ರಾವತಿ ನದಿಯ ನೆರೆಗೆ ಬಂಟ್ವಾಳ ಪೇಟೆ ಮುಳುಗಡೆಯಾಗುತ್ತಿದ್ದು ಅಪಾಯಕಾರಿ ಸ್ಥಳದಲ್ಲಿರುವವರನ್ನು ಸ್ಥಳಾಂತರಿಸಲಾಗುತ್ತಿದೆ. ನೆರೆಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಆಹಾರ ಮತ್ತು ದಿನಬಳಕೆಯ ವಸ್ತು ಪೂರೈಸಲಾಗುತ್ತಿದೆ.

ಜಾಹೀರಾತು

ತಡರಾತ್ರಿವರೆಗೆ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ಕ್ಷೇತ್ರದುದ್ದಕ್ಕೂ ಸಂಚರಿಸಿ, ಅಹವಾಲು ಆಲಿಸಿ, ಪರಿಹಾರ ಕ್ರಮ ಕೈಗೊಳ್ಳಲು ಉಪಕ್ರಮಿಸಿದ್ದಾರೆ. ಅವರೊಂದಿಗೆ ಪ್ರಮುಖರಾದ  ಬಿ. ದೇವದಾಸ ಶೆಟ್ಟಿ, ಎ. ಗೋವಿಂದ ಪ್ರಭು, ಪವನ್ ಶೆಟ್ಟಿ, ಸುದರ್ಶನ ಬಜ, ಮನೋಜ್ ಕಳ್ಳಿಗೆ ಮತ್ತಿತರರು ಇದ್ದರು.

 www.bantwalnews.comಸಂಪಾದಕ: ಹರೀಶ ಮಾಂಬಾಡಿ

ಸುದ್ದಿ, ಲೇಖನಗಳಿಗೆ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts