ಬಂಟ್ವಾಳ

ಕರಾರಸಾನಿಗಮದ ಸಹಾಯಕ ಕಾರ್ಯ ಅಧೀಕ್ಷಕರಿಗೆ ಬೀಳ್ಕೋಡುಗೆ

ಕಳೆದ 35 ವರ್ಷಗಳಿಂದ ಕ.ರಾ.ರ.ಸಾ.ನಿಗಮದಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಪುತ್ತೂರು ವಿಭಾಗದ ಬಿ.ಸಿ.ರೋಡ್ ಘಟಕದಲ್ಲಿ ಸಹಾಯಕ ಕಾರ್ಯ ಅಧೀಕ್ಷಕರಾಗಿದ್ದ ಅಂತೋನಿ ಲಿಯೋ ತಾವ್ರೋ ರವರ ಬೀಳ್ಕೊಡುಗೆ ಸಮಾರಂಭ ಕ.ರಾ.ರ.ಸಾ.ನಿಗಮದ ಬಿ.ಸಿ.ರೋಡು ಘಟಕದಲ್ಲಿ  ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ವ್ಯವಸ್ಥಾಪಕರಾದ ಶ್ರೀಷ್ ಭಟ್ ವಹಿಸಿ ತಾವ್ರೋ ಅವರು ಕಳೆದ 35 ವರ್ಷದ ತಮ್ಮ ಸೇವೆಯಲ್ಲಿ ದಕ್ಷ,ಪ್ರಾಮಾಣಿಕತೆ ಹಾಗೂ ತಂಡ ಮನೋಭಾವದ ಮೂಲಕ  ನಿರ್ವಹಿಸಿದ್ದು,  ಅವರ ಈ ಸೇವೆ ತಮಗೆಲ್ಲರಿಗೂ ಮಾದರಿಯಾಗಿದೆ ಎಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿಗಮದ ಬಿ.ಸಿ.ರೋಡು ಘಟಕದ ಸಿಬ್ಬಂದಿಗಳ ವತಿಯಿಂದ ಅಂತೋನಿ ಲಿಯೋ ತಾವ್ರೋ ದಂಪತಿಯನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಮಂಗಳೂರು ವಿಭಾಗದ ಅಂಕಿ ಅಂಶ ಅಧಿಕಾರಿ ಪಿ.ಇಸ್ಮಾಯಿಲ್ ಅತಿಥಿಯಾಗಿ ಭಾಗವಹಿಸಿ ತಾವ್ರೋ ಅವರ ಸೇವೆಯನ್ನು ಶ್ಳಾಘಿಸಿದರು.
ಘಟಕದ ಸಿಬಂದಿಗಳಾದ ಜಯರಾಮ್,ಸಂತೋಷ್ ಭಟ್,ರಮೇಶ್,ಅತಾವುಲ್ಲಾ,ಗಣೇಶ್ ಅವರು ಸಮಯೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸಂಚಾರ ನಿರೀಕ್ಷಕ ಗಣೇಶ್ ಪೈ ಸ್ವಾಗತಿಸಿ,ಪ್ರಸ್ತಾವಿಸಿದರು.ಸುರೇಶ್ ರೈ ವಂದಿಸಿದರು.ಕೆ.ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ