ವಾಮದಪದವು

ನಿವೃತ್ತ ಯೋಧರಿಗೆ ಸನ್ಮಾನ ಮೂಲಕ ವಿಜಯ ದಿವಸ್ ಆಚರಣೆ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ನಿವೃತ್ತ ಸೈನಿಕ ಮೋಹನ್ ಜಿ.ಮೂಲ್ಯ ಅವರನ್ನು ಸನ್ಮಾನಿಸುವ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ಧಕಟ್ಟೆ ಘಟಕ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ ಆಚರಣೆ ನಡೆಸಿತು.

ಸಂಗಬೆಟ್ಟು ನಿವಾಸಿಯಾಗಿರುವ ನಿವೃತ್ತ ಸೈನಿಕ ಮೋಹನ್.ಜಿ.ಮೂಲ್ಯ ಮನೆಗೆ ಭೇಟಿ ನೀಡಿ, ಅವರೊಂದಿಗೆ ಮಾತುಕತೆ ನಡೆಸಿದ ಎಬಿವಿಪಿ ಸದಸ್ಯರು, ಅವರನ್ನು ಸನ್ಮಾನಿಸಿ ಗೌರವಿಸಿದರು.

ಸೈನ್ಯದಲ್ಲಿರುವ ಎಲ್ಲರು ಒಂದೇ ರೀತಿಯ ಚಿಂತನೆ, ಮನೋಭಾವ ಹೊಂದಿರುವುದರಿಂದ ಯುದ್ಧದಲ್ಲಿ ಹೋರಾಡಲು ಹೊಸ ಹುಮ್ಮಸ್ಸು ಬರುತ್ತದೆ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ಭಾರತ ಮಾತೆಯ ಸೇವೆಗೆ ಮುಂದಾಗಬೇಕು ಎಂದು ಈ ಸಂದರ್ಭ ಮೋಹನ್ ಮೂಲ್ಯ ಹೇಳಿದರು. ಎಬಿವಿಪಿ ಹಿತೈಷಿಗಳಾದ ರತ್ನ ಕುಮಾರ್ ಚೌಟ, ಸುರೇಶ್ ಕುಲಾಲ್, ಬೋಜ ಶೆಟ್ಟಿಗಾರ್, ಸಂತೋಷ್ ಸೋರ್ನಾಡ್ ಹಾಗೂ ಕಾರ್ಯಕರ್ತರಾದ ರಾಜೇಶ್, ಗುರುಪ್ರಸಾದ್, ದಿನೇಶ್, ದೀಪಕ್, ಪ್ರಜ್ವಲ್, ಕಿರಣ್, ಅರುಣ್, ಮನೀಶ್, ಪ್ರದೀಪ್, ರಂಜಿತ್, ಲಿತೇಶ್, ಸೂರಾಜ್ ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ