ಬಂಟ್ವಾಳ

ಶರತ್ ಮಡಿವಾಳ ನೆನಪಿನಲ್ಲಿ ವನಮಹೋತ್ಸವ

ಸಜೀಪಮೂಡದಲ್ಲಿರುವ ಕಂದೂರು ಶ್ರೀಕೃಷ್ಣ ಶಿಶು ಮಂದಿರ ಹಾಗೂ ಸಜೀಪ ಮುನ್ನೂರಿನ ಶಾಂತಿನಗರ ಸರಕಾರಿ ಪ್ರಾಥಮಿಕ ಶಾಲೆ ವಠಾರದಲ್ಲಿ ಪುಟಾಣಿ ಮಕ್ಕಳ ಸಹಭಾಗಿತ್ವದಲ್ಲಿ ಶರತ್ ಮಡಿವಾಳ ನೆನೆಪಿಗಾಗಿ ಹುತಾತ್ಮ ಶರತ್ ಅಭಿಮಾನಿ ಬಳಗದ ವತಿಯಿಂದ ವನಮಹೋತ್ಸವ ಮತ್ತು ಪುಟಾಣಿ ಮಕ್ಕಳಿಗೆ ಕೊಡೆ ವಿತರಣೆ ಮಾಡುವ ಮೂಲಕ ಬಲಿದಾನ ದಿವಸವನ್ನಾಗಿ ಅಚರಿಸಲಾಯಿತು.

ಜಾಹೀರಾತು

ಶ್ರೀಕೃಷ್ಣ ಶಿಶುಮಂದಿರ, ಶಾಂತಿನಗರ ಸರಕಾರಿ ಶಾಲೆ ಮತ್ತು ಶಾಂತಿನಗರ ಅಂಗನವಾಡಿ ಕೇಂದ್ರದ ಎಲ್ಲಾ ಮಕ್ಕಳಿಗೂ ಶರತ್ ಸವಿ ನೆನಪಿಗಾಗಿ ಕೊಡೆ ವಿತರಿಸಲಾಯಿತು. ಶರತ್ ಅವರ ತಂದೆ ತನಿಯಪ್ಪ ಮಡಿವಾಳ, ಧರ್ಮ ಜಾಗರಣ ಜಿಲ್ಲಾ ಸಂಯೋಜಕ್ ಸಚಿನ್ ಮೆಲ್ಕಾರ್, ಸಜೀಪ ಜನಸೇವಾ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಇದರ ನಿರ್ದೇಶಕ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ವಿಶ್ವಹಿಂದೂ ಪರಿಷತ್ ವಿಟ್ಲ ಪ್ರಖಂಡದ ಕಾರ್ಯಾಧ್ಯಕ್ಷ ಪದ್ಮನಾಭ ವಿಟ್ಲ, ವಿಶ್ವ ಹಿಂದೂ ಪರಿಷತ್ ನಾಯಕ ಲೋಹಿತ್ ಪಣೋಲಿಬೈಲು, ಚರಣ್ ಗಟ್ಟಿ ಮಾರ್ನಬೈಲು, ವಿಶ್ವನಾಥ ಪೂಜಾರಿ ಮರ್ತಾಜೆ, ಸದಾನಂದ ಸುವರ್ಣ, ಪುರುಷೋತ್ತಮ ಪೂಜಾರಿ ಮಿತ್ತಕಟ್ಟ, ಭಜರಂಗದಳ ಮುಖಂಡ ದೀಪಕ್ ಕೋಟ್ಯಾನ್ ಸಜೀಪ, ರವೀಂದ್ರ ಕಂದೂರು ಇದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ