ಸ್ವಚ್ಚತೆಯ ದೃಷ್ಟಿಯಿಂದ ಸಾರ್ವಜನಿಕರೂ ಮಿನಿ ವಿಧಾನಸೌಧವನ್ನು ತಮ್ಮ ಮನೆಯಂತೆ ಭಾವಿಸಬೇಕು ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದ್ಧಾರೆ.
ಮಿನಿ ವಿಧಾನಸೌಧ ಅವ್ಯತವಸ್ಥೆ ಕುರಿತು ಸಾರ್ವಜನಿಕರು ಸಿಎಂ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅವರ ಪ್ರಗತಿ ಪರಿಶೀಲನೆ ಸಂದರ್ಭ ಪ್ರಸ್ತಾಪಿಸಿದಾಗ ಉತ್ತರಿಸಿದ ತಹಶೀಲ್ದಾರ್, ಮಿನಿ ವಿಧಾನಸೌಧ ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಮೊದಲು ಸರಕಾರಿ ಕಚೇರಿಗೆ ಗೌರವ ಸಲ್ಲಿಸಲು ಕಲಿಯಿರಿ, ಮಿನಿವಿಧಾನಸೌಧವನ್ನು ತಮ್ಮ ಮನೆಯೆಂದು ಭಾವಿಸಿ, ತಮ್ಮ ಪೂರ್ಣ ಶ್ರಮವನ್ನು ಸ್ವಚ್ಚತೆಯ ಬಗ್ಗೆ ಗಮನಹರಿಸುತ್ತಿದ್ದೇವೆ. ಕೆಟ್ಟು ಹೋಗಿರುವ ಲಿಫ್ಟ್ ನಮ್ಮ ಸಂಬಳದ ಹಣವನ್ನು ಹಾಕಿ ಸರಿಪಡಿಸಲು ತೀರ್ಮಾನಿಸಿದ್ದೆವೆ, ಈಗಾಗಲೇ ಮಿನಿವಿಧಾನಸೌಧಕ್ಕೆ ಪೈಂಟ್ ಕೊಡಿಸಲಾಗಿದೆ. ವಿದ್ಯುತ್ ಸಮಸ್ಯೆ ನಿವಾರಣೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ. ಸಾರ್ವಜನಿಕರು ಕೂಡ ಮಿನಿ ವಿಧಾನಸೌಧದ ಸ್ವಚ್ಚತೆಗೆ ನಮ್ಮ ಸಹಕರಿಸುವಂತೆ ಕೋರಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…