ಕಳೆದೊಂದು ವಾರದಲ್ಲಿ ನಾಲ್ಕು ಬಾರಿ ಬಂಟ್ವಾಳ ತಾಲೂಕಿನಲ್ಲಿ ಹಗಲು ಬಿಸಿಲಿದ್ದರೆ ಮಧ್ಯರಾತ್ರಿ ಮಳೆ ಸುರಿಯುತ್ತಿದೆ. ಸಿಡಿಲು, ಪ್ರಖರ ಮಿಂಚಿನೊಂದಿಗೆ ಸುರಿಯುವ ಮಳೆಯ ಸಂದರ್ಭ ಕೆಲವೆಡೆ ವಿದ್ಯುತ್ ಕೈಕೊಟ್ಟರೆ, ಕೆಲವೆಡೆ ಶೀತಗಾಳಿಯೊಂದಿಗೆ ಹನಿಹನಿ ಮಳೆಯಾಗುತ್ತಿದೆ.
ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ಬುಧವಾರ ರಾತ್ರಿ ಮಳೆಯೊಂದಿಗೆ ಸಿಡಿಲಾಘಾತದಿಂದ ರುಕ್ಮಯ ಪೂಜಾರಿ ಎಂಬವರ ಪುತ್ರ ಭರತ್ ಕುಮಾರ್ ಎಂಬವರ ಮನೆಯ ತೆಂಗಿನ ಮರಗಳು, ವಿದ್ಯುತ್ ವಯರಿಂಗ್ ಗೆ ಹಾನಿಯಾದರೆ, ಹಟ್ಟಿಯಲ್ಲಿದ್ದ ಕರು ಆಘಾತಗೊಂಡಿತ್ತು.ಮನೆಯ ಕೆಲ ಭಾಗಗಳಲ್ಲಿ ಬಿರುಕು ಬಿಟ್ಟಿದ್ದು, ಈ ಕುರಿತು ಸ್ಥಳೀಯ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.