ಬಂಟ್ವಾಳ

ಬಂಟ್ವಾಳ ಬಸದಿ ಪಂಚಕಲ್ಯಾಣದ 50 ನೇ ವಾರ್ಷಿಕೋತ್ಸವ

ಸುಮಾರು 400ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಬಂಟ್ವಾಳದ ಭ.1008 ಶ್ರೀ ಆದಿನಾಥ ತೀರ್ಥಂಕರ ಜಿನ ಚೈತ್ಯಾಲಯದಲ್ಲಿ ಸುವರ್ಣಮೂರ್ತಿ ಪಂಚಕಲ್ಯಾಣವಾಗಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠೆಯ 50ನೇ ವಾರ್ಷಿಕೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು.

ಜಾಹೀರಾತು

ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷಿಕ್ತರಾದ ಸಂದರ್ಭ ಕೈಗೊಂಡ ಪ್ರಥಮ ಜೀರ್ಣೋದ್ಧಾರ ಕಾರ್ಯವಾದ ಬಂಟ್ವಾಳ ಬಸದಿಯ ಜೀರ್ಣೋದ್ಧಾರ, ಪಂಚಕಲ್ಯಾಣ ಪೂರ್ವಕ ಪ್ರತಿಷ್ಠೆ ನಡೆಸಿ ಐವತ್ತು ವರ್ಷಗಳು ಕಳೆದಿವೆ. ಪ್ರತೀ ವರ್ಷವೂ ಬಸದಿಯ ಪೂಜಾ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. 50 ವರ್ಷಗಳಾದ ಹಿನ್ನೆಲೆಯಲ್ಲಿ ಮೇ.24ರಿಂದ 26ರವರೆಗೆ ಮೂಡುಬಿದಿರೆ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತೀ ವೀ. ಹೆಗ್ಗಡೆ ಮತ್ತು ಕುಟುಂಬಸ್ಥರು ನೆರವೇರಿಸಿದರು.

24ರಂದು ತೋರಣ ಮುಹೂರ್ತ, ವಿಮಾನ ಶುದ್ಧಿ, ಮುಖ ವಸ್ತ್ರ ಉದ್ಘಾಟನೆ, ಕ್ಷೇತ್ರ ಪಾಲ ಪ್ರತಿಷ್ಠೆ, ನಾಗ ಪ್ರತಿಷ್ಠೆ, 24 ಕಲಶ ಅಭಿಷೇಕ, ಮಹಾಪೂಜೆ, ನಾಂದಿ ಮಂಗಳ ವಿಧಾನ ನೆರವೇರಿದವು. 25ರಂದು ವಾಸ್ತುಪೂಜೆ, ನವಗ್ರಹ ಶಾಂತಿ, ಮುಖವಸ್ತ್ರ ಉದ್ಘಾಟನೆ, ಮಂಗಳಾರತಿ, ಮಹಾ ಮಾತೆ ಪದ್ಮಾವತಿ ದೇವಿಯ ಪದ್ಮಾವತಿ ಆರಾಧನೆ ಮತ್ತು ಪದ್ಮಾವತಿ ಪ್ರತಿಷ್ಠೆ, ಮಹಾ ಮಾತೆ ಪದ್ಮಾವತಿ ದೇವಿಗೆ ಲಕ್ಷ ಹೂವಿನ ಪೂಜೆ, ಭಗವಾನ್ 1008 ಶ್ರೀ ಆದಿನಾಥ ತೀರ್ಥಂಕರರಿಗೆ 54 ಕಲಶ ಅಭಿಷೇಕ, ಮಹಾ ಪೂಜೆ ನಡೆಯಿತು.

ಭಾನುವಾರ ಅಷ್ಟ ದಿಕ್ಷು ಧಾಮಸಂಪ್ರೋಕ್ಷಣೆ, ನಯನೋನ್ಮಿಲನ, ಮುಖ ವಸ್ತ್ರ ಉದ್ಘಾಟನೆ, ಸಾಮೂಹಿಕ ಭಕ್ತಾಮರ ಆರಾಧನೆ, ಮಹಾಪೂಜೆ, ಧಾರ್ಮಿಕ ಸಭೆ, 108 ಕಲಶ ಅಭಿಷೇಕ,ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.

ಜಾಹೀರಾತು

ಈ ಸಂದರ್ಭ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್, ಭಾರತೀಯ ಜೈನ್ ಮಿಲನ್ ಪ್ರಮುಖರಾದ ಸುದರ್ಶನ ಜೈನ್, ಸುಭಾಶ್ಚಂದ್ರ ಜೈನ್, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ. ಸುದೀಪ್ ಕುಮಾರ್ ಜೈನ್ ಸಿದ್ದಕಟ್ಟೆ, ಹರ್ಷರಾಜ್ ಬಲ್ಲಾಳ್, ಭಗವಾನ್ ದಾಸ್, ಭರತ್ ಕುಮಾರ್, ಪ್ರವೀಣ್ ಕುಮಾರ್, ಅರ್ಕಕೀರ್ತಿ ಇಂದ್ರ, ಪುಷ್ಪರಾಜ ಇಂದ್ರ, ಜಯರಾಜ ಇಂದ್ರ, ಶಿಶಿರಕುಮಾರ ಇಂದ್ರ ಸೇರಿದಂತೆ ಪುರೋಹಿತ ವರ್ಗ, ಜೈನ ಧರ್ಮದ ವಿವಿಧ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ