ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡುಕೋಣ ನಾಡಿಗೆ ಬಂದು ಮಾಡಿದ ಆವಾಂತರಗಳು ಒಂದೆಡೆಯಾದರೆ, ದೂರದ ರಾಮನಗರ ತಾಲೂಕಿನಲ್ಲಿ ಕಾಡುಹಂದಿಯೊಂದು ಮನೆಗೆ ನುಗ್ಗಿ ಟಿ.ವಿ, ಸಾಮಾನು ಸರಂಜಾಮುಗಳನ್ನು ಪುಡಿಗಟ್ಟಿದೆ.
ಶುಕ್ರವಾರ ತಡರಾತ್ರಿ ರಾಮನಗರ ತಾಲೂಕಿನ ಡಣಾಯ್ಕನಪುರ ಗ್ರಾಮದ ಸಣ್ಣಮ್ಮ ಎಂಬುವವರ ಮನೆಗೆ ನುಗ್ಗಿರುವ ಕಾಡು ಹಂದಿ, ಕಿಟಕಿ ಗಾಜು ಪುಡಿ ಮಾಡಿ. ಮನೆಯಲ್ಲಿದ್ದ ಪಾತ್ರೆ ಸಾಮಾನು ಸರಂಜಾಮುಗಳನ್ನ ಚೆಲ್ಲಾಪಿಲ್ಲಿ ಮಾಡಿತು.ಆದರೆ ಟಿವಿ ಒಡೆಯುವ ರಭಸಕ್ಕೆ ಅದರ ಗ್ಲಾಸ್ ಹಂದಿಗೆ ಚುಚ್ಚಿದ್ದು, ಗಾಯಗೊಂಡಿತು. ಬಳಿಕ ಕಿಟಿಕಿಯಿಂದಲೇ ಪರಾರಿಯಾಗಿದೆ.