ಸಿನಿಮಾ

ರೆಡ್ ಎಫ್ ಎಂ ತುಳು ಚಿತ್ರ ಪ್ರಶಸ್ತಿ ಪ್ರದಾನ

ಪ್ರಸಿದ್ಧ ಬಾನುಲಿ ಚಾನೆಲ್ ರೆಡ್ ಎಫ್.ಎಂ. ಆಯೋಜನೆಯಲ್ಲಿ ತುಳು ಚಲನಚಿತ್ರ ಪ್ರಶಸ್ತಿ ಪ್ರದಾನ (ಸೀಸನ್ 4) ಮಂಗಳೂರಿನ ಕದ್ರಿ ಕ್ರಿಕೆಟ್ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.

ಜಾಹೀರಾತು

ಜಾಹೀರಾತು

ಚಿತ್ರನಟ ವಿಜಯ್ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್, ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ನ ಎಂ ಡಿ ಶ್ರೀನಾಥ್ ಹೆಬ್ಬಾರ್, ಓರಿಯೆಂಟಲ್ ಇನ್ಶೂರೆನ್ಸ್ ನ ಉಷಾ, ಐಡಿಯಲ್ ಐಸ್ ಕ್ರೀಮ್ ನ ಮುಕುಂದ್ ಕಾಮತ್, ಎಸ್.ಎಲ್.ಶೇಟ್ ಜುವೆಲರಿಯ ಪ್ರಶಾಂತ್ ಶೇಟ್, ಹಿರಿಯ ಸಾಹಿತಿ ಸೀತಾರಾಮ್ ಕುಲಾಲ್, ವಿತರಕರು ನಿರ್ಮಾಪರೂ ಆಗಿರುವ ಟಿ.ಎ. ಶ್ರೀನಿವಾಸ್ ರೆಡ್ ಎಫ್.ಎಂ. ಡಿಜಿಎಂ ಸುರೇಶ ಗಣೇಸನ್ ಹಾಗು ಶೋಭಿತ್ ಶೆಟ್ಟಿ , ಕರ್ನಲ್ ಶರತ್ ಭಂಡಾರಿ ಉಪಸ್ಥಿತರಿದ್ದರು.

2017 ರಲ್ಲಿ ಬಿಡುಗಡೆಯಾದ 10 ಸಿನೆಮಾಗಳಲ್ಲಿ ಆಯ್ದ 22 ವಿಭಾಗಗಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು,  ತುಳು ಚಿತ್ರರಂಗದ ಆರಂಭದ ದಿನಗಳಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಜೆ ಸೀತಾರಾಮ ಶೆಟ್ಟಿ ಯವರಿಗೆ ಜೀವಮಾನ ಸಾಧನೆಗೆ ಪ್ರಶಸ್ತಿ ನೀಡಲಾಯಿತು. ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ