Categories: ಬಂಟ್ವಾಳ

ಪೊಳಲಿ ಬ್ರಹ್ಮಕಲಶ ಹೊರೆಕಾಣಿಕೆ ಯಶಸ್ವಿಗೆ ಪೂರ್ವಭಾವಿ ಸಭೆ

ಬಂಟ್ವಾಳ: ಪೊಳಲಿಯಲ್ಲಿ ನಡೆಯಲಿರುವ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬ್ರಹ್ಮಕಲಶದ ಹಿನ್ನೆಲೆಯಲ್ಲಿ ಮಾರ್ಚ್ 5ರಂದು ನಡೆಯಲಿರುವ ಹೊರೆಕಾಣಿಕೆ ಮೆರವಣಿಗೆ ಹಿನ್ನೆಲೆಯಲ್ಲಿ ನರಿಕೊಂಬು ಶಂಭೂರು ಪರಿಸರದ ಭಕ್ತರ ಪೂರ್ವಭಾವಿ ಸಭೆ ನಡೆಯಿತು.

ಜಾಹೀರಾತು

ಶಂಭೂರು- ನರಿಕೊಂಬು – ಬೊಂಡಾಲ ಮತ್ತು ಎಲ್ಲಾ ಸ್ಥಳೀಯ ಭಗವಭಕ್ತರ, ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಹಸಿರು ಹೊರೆ ಕಾಣಿಕೆಯನ್ನು ಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತ್ತು. ಹೊರೆ ಕಾಣಿಕೆ ಕೊಡಲಿಚ್ಚಿಸುವವರು ನಿಗದಿ ಪಡಿಸಿದ ನರಿಕೊಂಬು – ಮೋಗರ್ನಾಡ್ ಲಕ್ಷ್ಮೀ ನರಸಿಂಹ  ದೇವಸ್ಥಾನ, ಪಾಣೆಮಗಳೂರು – ಕಲ್ಲುರ್ಟಿ ದೈವಸ್ಥಾನ , ಶಂಭೂರು ಶೇಡಿಗುರಿ ಬೊಂಡಾಲ- ಗಣೇಶೋತ್ಸವ ಸಮುದಾಯ ಭವನದಲ್ಲಿ ಬೆಳ್ಳಿಗೆ 11 ಗಂಟೆಯ ಮೊದಲು ಕೊಡಬೇಕು ಮತ್ತು ಮಾ.5ರಂದು ಬೆಳ್ಳಿಗೆ 11.30ಕ್ಕೆ ಶೇಡಿಗುರಿ ಗಣೇಶೋತ್ಸವ ಸಮುದಾಯ ಭವನದಿಂದ ಹೊರಡುವ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಹಾಗೂ ಬಿ.ಸಿ. ರೋಡ್ ನಿಂದ ಹೊರಡುವ ಬಂಟ್ವಾಳ ತಾಲೂಕಿನ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಯಿತು.

ಸಭೆಯಲ್ಲಿ ಪ್ರಮುಖರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪದ್ಮನಾಭ ಮಯ್ಯ ಎಳಬೆ, ಪ್ರಕಾಶ್ ಕಾರಂತ ನರಿಕೊಂಬು, ಪಂಚಾಯತ್ ಮಾಜಿ ಅಧ್ಯಕ್ಷರಾದ ಆನಂದ ಸಾಲ್ಯಾನ್, ತಾಲೂಕ್ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆನಂದ ಶಂಭೂರು,  ರಘು ಸಪಲ್ಯ, ಕೇಶವ ಪೂಜಾರಿ, ಸುಪ್ರೀತ್ ಶೆಟ್ಟಿ ಬೊಂಡಾಲ, ಕೃಷ್ಣಪ್ಪ ಪೂಜಾರಿ ನಾಟಿ, ಯಶೋಧರ ಬಂಗೇರ, ಗೋಪಾಲ ಮತ್ತು ಸ್ಥಳೀಯರು ಭಾಗವಹಿಸಿದ್ದರು.

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ