Categories: ಬಂಟ್ವಾಳ

ಮಾತೃಭಾಷಾ ದಿನಾಚರಣೆ

ತಾಯಿಗೆ ನೀಡುವ ಗೌರವ ಮಾತೃಭಾಷೆಗೂ ನೀಡಬೇಕು. ಭಾಷೆಗಳಲ್ಲಿ ಮೇಲು-ಕೀಳು ಎಂಬುದು ಇಲ್ಲ. ಎಲ್ಲ ಭಾಷೆಗೂ ಅದರದ್ದೇ ಆದ ಸತ್ವವಿದೆ. ಎಲ್ಲ ಭಾಷೆಗಳನ್ನೂ ಗೌರವಿಸಿ ಪ್ರೀತಿಸಿ ಎಂದು ನಿವೃತ್ತ ಸಂಸ್ಕೃತ ಅಧ್ಯಾಪದ ಶಂಕರ್‌ ಭಟ್ ಹೇಳಿದರು. ಬಂಟ್ವಾಳದ ಬಿ.ಆರ್.ಎಂ.ಪಿ.ಸಿ.ಪಿ. ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಅಂಗವಾಗಿ ನಡೆದ ಕಾರ್‍ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಾಹೀರಾತು

ಪ್ರಿನ್ಸಿಪಾಲ್ ರಮಾಶಂಕರ್ ಹಾಗೂ ಶಿಕ್ಷಕ ವರ್ಗದವರು ಈ ಕಾರ್‍ಯಕ್ರಮದಲ್ಲಿ ಪಾಲ್ಗೊಂಡರು. ಗುಜರಾಥಿ, ಒರಿಯಾ, ಮರಾಠಿ, ಭಾಷೆಗಳ ಭಾಷಣ, ತಮಿಳು, ತೆಲುಗು, ಮಲಯಾಳಿ ಭಾಷೆಗಳ ಭಾಷಾ ವೈಶಿಷ್ಟ್ಯತೆ ಸಾರುವ ಭಾಷಣ ಹಾಗೂ ಪ್ರಹಸನಗಳು ಕೊಂಕಣಿ ಭಾಷೆಯ ಸಮೂಹಗಾಯನ, ಲೇಖನಗಳು, ತುಳುಭಾಷೆಯ ಸಂಸ್ಕೃತಿಯನ್ನು ಸಾರುವ ಭಾಷಣ, ಒಗಟುಗಳು, ಗಾದೆಗಳು, ನಾಟಕಗಳುಜರುಗಿದವು. ಶಿವಳ್ಳಿ ತುಳು ಭಾಷೆಯ ಪ್ರಹಸನ ಪ್ರದರ್ಶಿಸಲಾಯಿತು. ಮೈಸೂರು ಕನ್ನಡ, ಕುಂದಾಪುರ ಕನ್ನಡ, ಕೋಟಕನ್ನಡ, ಹವ್ಯಕ ಕನ್ನಡ ಭಾಷೆಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬ್ಯಾರಿ ಸಾಹಿತ್ಯದ ಒಂದು ವಿಶೇಷತೆಯಾದ ಬುರ್ದಾ ಹಾಡನ್ನು ವಿದ್ಯಾರ್ಥಿಗಳು ಧಾರ್ಮಿಕ ರೀತಿಯಲ್ಲಿ ಪಠಣ ಮಾಡಿದರು. ೮ನೇ ತರಗತಿಯ ಬಿ.ಶ್ರೇಯಸ್ ಶೆಣೈ ಮತ್ತು ಆದೀಶ್ ಇಂದ್ರ ಕಾರ್‍ಯಕ್ರಮ ನಿರ್ವಹಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ