Categories: ಬಂಟ್ವಾಳ

ಸೈನಿಕರ ಸ್ಥೈರ್ಯ ವೃದ್ಧಿಸುವ ಕೆಲಸವಾಗಲಿ: ಸತ್ಯಜಿತ್ ಸುರತ್ಕಲ್

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಬಂಟ್ವಾಳ: ದೇಶ ಕಾಯುವ ನಮ್ಮ ವೀರ ಸೈನಿಕರ ನೈತಿಕ ಸ್ಥೈರ್ಯ ವೃದ್ಧಿಸುವ ಕೆಲಸವಾಗಬೇಕು ಎಂದು ಹಿಂದು ಜಾಗರಣಾ ವೇದಿಕೆ ಪ್ರಮುಖ ಸತ್ಯಜಿತ್ ಸುರತ್ಕಲ್ ಹೇಳಿದರು.

ಬಂಟ್ವಾಳ ಹಿಂದು ಜಾಗರಣಾ ವೇದಿಕೆ ವತಿಯಿಂದ ಬಿ.ಸಿ.ರೋಡಿನ ಬಸ್ ನಿಲ್ದಾಣದಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮೌನ ಪ್ರಾರ್ಥನೆ ಬಳಿಕ, ವೀರಯೋಧರ ಭಾವಚಿತ್ರ ಕ್ಕೆ ಪುಷ್ಪಾಂರ್ಚನೆ ಸಲ್ಲಿಸಿ ಮಾತನಾಡಿದ ಸತ್ಯಜಿತ್ ಸುರತ್ಕಲ್, ದೇಶ ಕಾಯುವ ನಮ್ಮ ವೀರ ಸೈನಿಕರು ಹೇಡಿ ಉಗ್ರರ ದಾಳಿಗೆ ಬಲಿಯಾದ ಕ್ಷಣ ಇಡೀ ದೇಶದ ಜನತೆಯನ್ನು ಕಣ್ಣೀರು ಹಾಕುವಂತೆ ಮಾಡಿದೆ. ಪ್ರತಿಯೊಬ್ಬ ಸೈನಿಕರ ಬಲಿದಾನವು ನಮಗೆ  ನೋವು ತಂದಿದೆ. ಮಾನವ ಹಕ್ಕುಗಳ ಹೆಸರಿನಲ್ಲಿ ಸೈನಿಕರ ಮೇಲೆ ಆಕ್ರಮಣ, ಕೆಲವು ರಾಜಕೀಯ ಪಕ್ಷಗಳ ತೊಂದರೆ , ಪ್ರತಿಕೂಲ ಪರಿಸ್ಥಿತಿ ಯ ಜೊತೆ ಹೋರಾಟ ಇವೆಲ್ಲವುಗಳ ಮಧ್ಯೆ ದೇಶ ರಕ್ಷಣೆ ಮಾಡುವ ಸೈನಿಕರ ಬಗ್ಗೆ ನಾವು ಒಂದು ದಿನವೂ ಯೋಚನೆ ಮಾಡಿಲ್ಲ, ಅವರ ಕುಟುಂಬದ ಸ್ಥಿತಿ ಯನ್ನು ನೋಡಿಲ್ಲ. ದೇಶದ ರಕ್ಷಣೆ ಗೋಸ್ಕರ ಪ್ರತಿಕ್ಷಣವೂ ತುಡಿತದಲ್ಲಿರುವ ಸೈನಿಕರಿಗೆ ಶಕ್ತಿತುಂಬುವ ಕೆಲಸ ನಾವೆಲ್ಲ ರೂ ಮಾಡಬೇಕಾಗಿದೆ. ದೇಶದ್ರೋಹಿಗಳಿಗೆ ಆಶ್ರಯ ನೀಡುವ ಭಯೋತ್ಪಾದಕ ರು ನಮ್ಮ ನೆರೆಹೊರೆಯಲ್ಲಿದ್ದಾರೆ ಎಂಬುದು ವಿಷಾದನೀಯ ಎಂದರು. ‌ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ರವಿರಾಜ್ ಬಿಸಿರೋಡ್, ಚಂದ್ರಕಲಾಯಿ, ರತ್ನಾಕರ ಶೆಟ್ಟಿ, ಮಚ್ಚೇಂದ್ರ ಸಾಲಿಯಾನ್, ಶೇಖರ್ ಶೆಟ್ಟಿ, ಯೋಗೀಶ್ ತುಂಬೆ ಮತ್ತಿತರ ರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ