ಕಲ್ಲಡ್ಕ

ಜಿಲ್ಲಾ ಮಟ್ಟದ ಕಬಡ್ಡಿ: ಸೆವೆನ್ ಸ್ಟಾರ್ ಕಲ್ಪನೆ ಪ್ರಥಮ

ಕಲ್ಲಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಯುವಕ ಮಂಡಲ ವತಿಯಿಂದ ಭಾನುವಾರ ರಾತ್ರಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಆಯೋಜಿಸಲಾದ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಸೆವೆನ್ ಸ್ಟಾರ್ ಕಲ್ಪನೆ ತಂಡ ಪ್ರಥಮ ಬಹುಮಾನ ಗಳಿಸಿದೆ.

ಜಾಹೀರಾತು

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಜ್ಯೋತಿ ಬೆಳಗಿಸುವುದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಹಜಾಜ್ ಗ್ರೂಪ್ ಪಾಲುದಾರ ಯೂಸುಫ್ ಹಾಜಿ ಗೋಳ್ತಮಜಲು, ಉದ್ಯಮಿ ಜಯಪ್ರಕಾಶ ತುಂಬೆ, ಹಿಂಜಾವೇ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ, ಪ್ರಮುಖರಾದ ದಿನೇಶ್ ಶೆಣೈ ಕಲ್ಲಡ್ಕ, ನರಸಿಂಹ ಮಡಿವಾಳ ಕಲ್ಲಡ್ಕ, ನೇತಾಜಿ ಯುವಕ ಮಂಡಲ ಅಧ್ಯಕ್ಷ ಧನುಷ್ ಉಪಸ್ಥಿತರಿದ್ದರು. ನೇತಾಜಿ ಯುವಕ ಮಂಡಲ ಗೌರವಾಧ್ಯಕ್ಷ ನಾಗೇಶ್ ಸ್ವಾಗತಿಸಿದರು. ಗೋಪಾಲ ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು.ಸಂಪತ್ ಕೋಟ್ಯಾನ್ ಕಡೇಶಿವಾಲಯ ವಂದನಾರ್ಪಣೆ ನಡೆಸಿದರು.

ಜಾಹೀರಾತು

ಬಳಿಕ ನಡೆದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಸೆವೆನ್ ಸ್ಟಾರ್ ಕಲ್ಪನೆ ಮೊದಲ ಬಹುಮಾನ, ಎಲ್.ವಿ.ಎಸ್.ಎಸ್. ಜಾರಂದಗುಡ್ಡೆ ದ್ವಿತೀಯ ಬಹುಮಾನ ಮತ್ತು ಟಿಕ್ಕಾ ಪಾಯಿಂಟ್ ಕಲ್ಲಡ್ಕ ತಂಡ ತೃತೀಯ ಬಹುಮಾನ ಪಡೆದವು. ಫ್ರೆಂಡ್ಸ್ ಸುದೆಕಾರ್ ತಂಡ ನಾಲ್ಕನೇ ಸ್ಥಾನಿಯಾಯಿತು.

ಜಾಹೀರಾತು

ಬೆಸ್ಟ್ ರೈಡರ್ ಆಗಿ ಎಲ್.ವಿ.ಎಸ್.ಎಸ್.ನ ರಂಜಿತ್, ಬೆಸ್ಟ್ ಕ್ಯಾಚರ್ ಆಗಿ ಸೆವೆನ್ ಸ್ಟಾರ್ ನ ನವಾಜ್, ಬೆಸ್ಟ್ ಆಲ್್ರೌಂಡರ್ ಆಗಿ ರಾಸಿದ್ (ಸೆವೆನ್ ಸ್ಟಾರ್), ಬೆಸ್ಟ್ ಮೂವ್ ವೆಂಟ್ ಆಫ್ ಪ್ಲೇಯರ್ ಆಗಿ ಎಲ್.ವಿ.ಎಸ್.ಎಸ್.ನ ಪೂರ್ಣೇಶ್ ಬಹುಮಾನ ಪಡೆದರು.

ಶಿಸ್ತುಬದ್ಧ ತಂಡವಾಗಿ ಮಾರುತಿ ಫ್ರೆಂಡ್ಸ್ ಕೋಡಪದವು ತಂಡ ಬಹುಮಾನ ಗಳಿಸಿತು.

ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ನೇತಾಜಿ ಯುವಕ ಮಂಡಲದ ಕ್ರೀಡಾ ಕಾರ್ಯದರ್ಶಿ ಹರೀಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್, ಅಧ್ಯಕ್ಷ ಧನುಷ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ