ಶಾಂತಿ ನೆಲೆಸುತ್ತಿದೆ ಎನ್ನುತ್ತಿದ್ದಾಗಲೇ ಬಿ.ಸಿ.ರೋಡಿನ ಕೈಕಂಬದಲ್ಲಿ ಮತ್ತೆ ಅಹಿತಕರ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಬಿ.ಸಿ.ರೋಡ್ ಕೈಕಂಬದ ಬಳಿ ನಿಂತಿದ್ದ ಮೂವರಿಗೆ ಕಾರಿನಲ್ಲಿ ಬಂದ ತಂಡ ಹಲ್ಲೆ ನಡೆಸಿ, ಇರಿದು ಪರಾರಿಯಾಗಿದೆ.
ಘಟನೆ ಬಳಿಕ ಗಾಯಾಳುಗಳನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಯಿತು.ಶಾಂತಿಯಂಗಡಿ, ತಾಳಿಪಡ್ಪು ನಿವಾಸಿಗಳಾದ ಅನ್ಸಾರ್ (23), ಸಫ್ವಾನ್ (23), ಹಾಗೂ ಫಯಾಝ್ (23) ಇರಿತಕ್ಕೊಳಗಾದವರು. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.