ಪ್ರಮುಖ ಸುದ್ದಿಗಳು

ನಂತೂರಿನಲ್ಲಿ ಉರುಳಿದ ಅನಿಲ ಟ್ಯಾಂಕರ್

ಮಂಗಳೂರಿನ ನಂತೂರು ಸರ್ಕಲ್ ಸಮೀಪ ಬುಧವಾರ ಬೆಳಗ್ಗಿನ ವೇಳೆ ಅನಿಲ ತುಂಬಿದ ಟ್ಯಾಂಕರ್ ಒಂದು ಉರುಳಿಬಿದ್ದ ಪರಿಣಾಮ ಕುಲಶೇಖರದಿಂದ ಮಂಗಳೂರಿಗೆ ತೆರಳುವ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಂಗಳೂರು ಪೊಲೀಸರು, ಅಗ್ನಿಶಾಮಕದಳ ಸಹಾಯದಿಂದ ಟ್ಯಾಂಕರನ್ನು ಮೇಲಕ್ಕೆತ್ತಿದ ಬಳಿಕ ವಾಹನ ಸಂಚಾರ ಮೊದಲಿನಂತಾಯಿತು. ಯಾವುದೇ ಗ್ಯಾಸ್ ಸೋರಿಕೆ ಆಗದ ಕಾರಣ ದೊಡ್ಡ ಮಟ್ಟದ ಅಪಾಯ ತಪ್ಪಿದೆ.

ಜಾಹೀರಾತು

ಟ್ಯಾಂಕರ್ ಅನ್ನು ಮೇಲಕ್ಕೆತ್ತಲು ಪ್ರಯತ್ನ ನಡೆದಿದ್ದು, ಗ್ಯಾಸ್ ಲೀಕೇಜ್ ಆಗದಂತೆ ಮೇಲಕ್ಕೆತ್ತಿದ ಬಳಿಕ ಸಂಚಾರ ಸುಗಮವಾಯಿತು. ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ.

ಏನಾಗಿತ್ತು:

ನಂತೂರಿನಿಂದ ಕುಲಶೇಖರ ತೆರಳುವ ದಾರಿಯ ಎರಡೂ ಬದಿಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಯಿತು. ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಪಡೀಲ್ ನಿಂದ ನಂತೂರು ಕಡೆ ಬಂದು ಮಂಗಳೂರಿಗೆ ತೆರಳುವವರು ಪಂಪ್ ವೆಲ್ ಮಾರ್ಗವನ್ನು ಕುಲಶೇಖರದಿಂದ ಮಂಗಳೂರಿಗೆ ತೆರಳುವವರೂ ಪಂಪ್ ವೆಲ್ ಮೂಲಕವೇ ಹೋಗಲು ಸೂಚಿಸಿದರು. ಟ್ಯಾಂಕರ್ ಮೇಲಕ್ಕೆತ್ತಿದ ಬಳಿಕ ರಸ್ತೆ ಸಂಚಾರ ಸುಗಮವಾಗಿ ಸಾಗಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ