ಬಂಟ್ವಾಳ

ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ಸನ್ಮಾನ

ಮಂಗಳೂರಿನ ರೇಡಿಯೋ ಸಾರಂಗ್ ಸಂಸ್ಥೆ ವತಿಯಿಂದ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರನ್ನು ಬುಧವಾರ ಸಂಜೆ ಏರ್ಯ ಬೀಡು ಮನೆಯಲ್ಲಿ ಸನ್ಮಾನಿಸಲಾಯಿತು.

ಜಾಹೀರಾತು

ಹೃದಯರಾಗ ಕಾರ್ಯಕ್ರಮದಡಿ ಆಳ್ವರ ಸಾಹಿತ್ಯ- ಸಾಮಾಜಿಕ ಬದುಕಿನ ಬಗ್ಗೆ ನೇರಪ್ರಸಾರ ಮಾತುಕತೆ ನಡೆಸಿದ ಸಾರಂಗ್ ಸಂಸ್ಥೆಯವರು ಬಳಿಕ ಏರ್ಯರನ್ನು ಸನ್ಮಾನಿಸಿದರು.

ಜನರು ನನ್ನ ಮೇಲೆ ಇಟ್ಡಿರುವ ಪ್ರೀತಿಯೇ ನನಗೆ ಜೀವನೋಲ್ಸಾಸ ನೀಡುತ್ತಿದೆ. ಪರಸ್ಪರ ಪ್ರೀತಿಯ ಬೆಸುಗೆಯ ಸಮಾಜ ಕಟ್ಟುವುದು ಇಂದಿನ ಅಗತ್ಯವಾಗಿದೆ ಎಂದು ಆಳ್ವ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ಏರ್ಯರ ನಡೆ, ನುಡಿ ಮತ್ತು ಬದುಕು ನಮಗೆಲ್ಲಾ ಮಾದರಿಯಾದುದು. ಅವರು ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದುದು ಎಂದರು.

ಜಾಹೀರಾತು

ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್, ಸಾರಂಗ್ ಸಂಸ್ಥೆಯ ಎಡ್ವರ್ಡ್ ಲೋಬೋ, ಸಿಂಚನ ಶ್ಯಾಮ್, ಪುಷ್ಪರಾಜ್ ರಾವ್, ಅಭಿಷೇಕ್ ಶೆಟ್ಟಿ, ಮಯೋಲ ಮಾರ್ಟಿಸ್ ಮೊದಲಾದವರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts