ಬಂಟ್ವಾಳ

ಗಣೇಶನಿಗೆ ಬೃಹದಾಕಾರದ ಎಳ್ಳುಂಡೆ ಹಾರ

ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ ಸಿ ರೋಡು ಇದರ ಆಶ್ರಯದಲ್ಲಿ  ನಡೆದ 39 ನೇ ವರ್ಷದ ಸಾರ್ವಜನಿಕ  ಶ್ರೀ ಗಣೇಶನಿಗೆ ಶ್ರೀರಾಮ ಗೆಳೆಯರ ಬಳಗ ಕೈಕಂಬ ಬಿ ಸಿ ರೋಡು ವತಿಯಿಂದ ಬೃಹದಾಕಾರದ ಎಳ್ಳುಂಡೆ ಹಾರ ಅರ್ಪಿಸಲಾಯಿತು.

ಜಾಹೀರಾತು

ಕೈಕಂಬ ಪೊಳಲಿ ದ್ವಾರದಿಂದ ಬಿ ಸಿ ರೋಡು ತನಕ ಮೆರವಣಿಗೆಯಲ್ಲಿ ಸಾಗಿದ ಸಂದರ್ಭ ಭಕ್ತರು ಬೃಹತ್ ಗಾತ್ರದ ಎಲ್ಲುಂಡೆ ಹಾರವನ್ನು ಗಣೇಶನಿಗೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸದಾಶಿವ ಕೈಕಂಬ, ಉಪಾಧ್ಯಕ್ಷ ಶೈಲೇಶ್ ಕೈಕಂಬ, ಗೌರವ ಸಲಹೆಗಾರ ರಮೇಶ್. ಮೆಲ್ವಿಚಾರಕ ಮಚ್ಚೆಂದ್ರ ಗುರುಕೃಪ ಹಾಗೂ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಒಟ್ಟು 3500 ಎಳ್ಳುಂಡೆ

ಜಾಹೀರಾತು

ಶ್ರೀರಾಮ ಗೆಳೆಯರ ಬಳಗ ಕೈಕಂಬ ವತಿಯಿಂದ ಬಿ.ಸಿ.ರೋಡ್ ಗಣೇಶನಿಗೆ ಅರ್ಪಿಸಿದ ಎಳ್ಳುಂಡೆಗಳ ಸಂಖ್ಯೆ 3500. ಇದು ನಾಲ್ಕನೇ ವರ್ಷದ ಸೇವೆ ಎನ್ನುತ್ತಾರೆ ಅದರ ಅಧ್ಯಕ್ಷ ಸದಾಶಿವ ಕೈಕಂಬ. 10 ಅಡಿ ಉದ್ದದ ಎಳ್ಳುಂಡೆ ಮಾಲೆಯನ್ನು ತಯಾರಿಸಲು 15 ಸಾವಿರ ರೂ ಖರ್ಚಾಗಿತ್ತು. ಮೆರವಣಿಗೆ ಬಳಿಕ ಸೇರಿದ್ದವರಿಗೆಲ್ಲ ಪ್ರಸಾದ ರೂಪದಲ್ಲಿ ಎಳ್ಳುಂಡೆಗಳನ್ನು ವಿತರಿಸಲಾಯಿತು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ