ಬಂಟ್ವಾಳ

ರಂಗಭೂಮಿಗೆ ಪರಿವರ್ತನೆಯ ಶಕ್ತಿ: ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ

ರಂಗಭೂಮಿಗೆ ಪರಿವರ್ತನೆಯ ಶಕ್ತಿ ಇದೆ, ನಾಟಕಗಳ ಮೂಲಕ ಜನಜಾಗೃತಿಗೊಳಿಸುವ ಕಾಯಕ ನಿತ್ಯನಿರಂತರವಾಗಬೇಕು ಎಂದು ಬಂಟ್ವಾಳ ರೋಟರೀ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಹೇಳಿದ್ದಾರೆ.

ಜಾಹೀರಾತು

ಗಾಂಧೀ ಜಯಂತಿಯ 150ನೆ ವರ್ಷಾಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಧಾರವಾಡ ಇವರ ಸಹಯೋಗದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ “ಗಾಂಧಿ 150- ಒಂದು ರಂಗ ಪಯಣ” ದ ಅಂಗವಾಗಿ  ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಬಂಟ್ವಾಳ ರೋಟರೀ ಕ್ಲಬ್ , ಇಂಟರ್‍ಯಾಕ್ಟ್ ಕ್ಲಬ್ ಬೆಂಜನಪದವು ಹಾಗೂ ಸಂಸಾರ ಜೋಡುಮಾರ್ಗ ಆಯೋಜನೆಯಲ್ಲಿ ನಡೆದ  “ಗಾಂಧಿ 150 ರಂಗರೂಪಕ”ಕ್ಕೆ ಡ್ರಮ್ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ,  ಪ್ರಾಂಶುಪಾಲ ಎ.ಟಿ.ಗಿರೀಶ್ಚಂದ್ರ, ಉಪಪ್ರಾಂಶುಪಾಲೆ ಶ್ರೀದೇವಿ,  ಬಂಟ್ವಾಳ ರೋಟರೀಕ್ಲಬ್ ಕಾರ್‍ಯದರ್ಶಿ ಶಿವಾನಿ ಬಾಳಿಗಾ, ವಿದ್ಯಾ ಎ.ರೈ, ರೋಟರೀ ಬಳಗದ ಬಸ್ತಿ ಮಾಧವ ಶೆಣೈ, ಸಂದೀಪ್ ಮಿನೇಜಸ್,ಸದಾಶಿವ ಬಾಳಿಗಾ, ಕಲಾವಿದ ತಂಡದ ನಾಯಕ ಮಧ್ವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಸುಜಾತಾ ಕೆ ಸ್ವಾಗತಿಸಿ, ಇಂಟರ್‍ಯಾಕ್ಟ್ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕಿ  ಹೇಮ ವಂದಿಸಿದರು.

ಜಾಹೀರಾತು

ಸಭಾ ಕಾರ್ಯಕ್ರಮದ ಬಳಿಕ ಡಾ.ಶ್ರೀಪಾದ ಭಟ್ ನಿರ್ದೇಶನದ ಬೊಳುವಾರು ಮಹಮ್ಮದ್ ಕುಂಞಯವರ ’ಪಾಪು ಗಾಂಧಿ ಬಾಪು ಗಾಂದಿ’ ಕಥೆ ಆದರಿಸಿದ  ’ಗಾಂಧಿ ೧೫೦’ ರೂಪಕವನ್ನು ರಂಗ ಪಯಣ ತಂಡ  ಮನೋಜ್ಞವಾಗಿ ಪ್ರದರ್ಶಿಸಿತು. ನಾಟಕದ ಕೊನೆಯಲ್ಲಿ ಎಲ್ಲಾ ಕಲಾವಿದರನ್ನು ಬಂಟ್ವಾಳ ರೋಟರಿ ಕ್ಲಬ್ ಹಾಗೂ ಸಂಸಾರ ಜೋಡುಮಾರ್ಗ ತಂಡದ ಪರವಾಗಿ ಶಾಲುಹೊದಿಸಿ ಅಭಿನಂದಿಸಲಾಯಿತು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ