ಬಂಟ್ವಾಳ

ಭಾರತ್ ಬಂದ್ ಆರಂಭ, ಕೆಲವೆಡೆ ಬಸ್ ಗಳಿಗೆ ಕಲ್ಲು

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಬೆಳಗ್ಗೆಯೇ ಬಸ್ ಗಳಿಗೆ ಕಲ್ಲು ಹೊಡೆಯುವ ಮೂಲಕ ಬಂದ್ ಆಚರಣೆಯ ಬಿಸಿ ಮುಟ್ಟಿಸಲಾಯಿತು.

PHOTO: KISHORE PERAJE

ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಟೈಯರುಗಳನ್ನು ಸುಟ್ಟರೆ, ಮಾಣಿ ಬಳಿಯೂ ಟೈಯರುಗಳಿಗೆ ಬೆಂಕಿ ಕೊಟ್ಟು ಬಂದ್ ಸಂಕೇತವನ್ನು ನೀಡಲಾಯಿತು. ಕುಲಶೇಖರದಲ್ಲೂ ಬೆಳ್ಳಂಬೆಳಗ್ಗೆ ಟೈಯರುಗಳನ್ನು ಸುಡಲಾಗಿದೆ.

ಜಾಹೀರಾತು

ಕದ್ರಿ ಶಿವಭಾಗ್ ಎಂಬಲ್ಲಿ ಹೋಟೆಲ್ ಒಂದಕ್ಕೆ ಕಲ್ಲೆಸೆದರೆ, ದೂರದೂರುಗಳಿಂದ ಬರುವ ಬಸ್ಸುಗಳಿಗೆ ಕಲ್ಲೆಸೆಯುವ ಪ್ರವೃತ್ತಿ ಈ ಬಂದ್ ನಲ್ಲೂ ಕಂಡುಬಂತು.

ಬಲ್ಮಠ ಬಳಿ ಖಾಸಗಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದರೆ, ಮಂಗಳೂರಿಗೆ ಬೆಂಗಳೂರಿನಿಂದ ಆಗಮಿಸುವ ಕೆ.ಎಸ್.ಆರ್.ಟಿ.ಸಿ. ಐರಾವತ ಬಸ್ ಗೆ ಬಿ.ಸಿ.ರೋಡ್ ಬಳಿಯ ತುಂಬ್ಯ ಜಂಕ್ಷನ್ ಬಳಿ ಅಪರಿಚಿತರು ಕಲ್ಲೆಸೆದಿದ್ದಾರೆ.

PHOTO: KISHORE PERAJE

ಇರಾ ಕಾಂಗ್ರೆಸ್ ಪ್ರತಿಭಟನೆ

ಜಾಹೀರಾತು

ಭಾರತ ದೇಶದಾದ್ಯಂತ  ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಬಾರತ್ ಬಂದ್ ಗೆ ಬೆಂಬಲಿಸುವ ನಿಟ್ಟಿನಿಂದ ರಝಾಕ್ ಕುಕ್ಕಾಜೆ ನೇತೃತ್ವದಲ್ಲಿ ಇರಾ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಅನಿಲ್ ಕುಮಾರ್ ಸೂತ್ರಬೈಲ್ (ಅಧ್ಯಕ್ಷರು ಇರಾ ವಲಯ ಕಾಂಗ್ರೆಸ್ ) ಝಾಹಿರ್ ಸಂಪಿಲ (ಯುವ ಕಾಂಗ್ರೆಸ್ ಕಾರ್ಯದರ್ಶಿ ಮಂಗಳೂರು ವಿ.ಕ್ಷೇತ್ರ) ಎ.ಜೆ ಪರಪ್ಪು (ಯೂತ್ ಕಾಂಗ್ರೆಸ್) ಪ್ರತಾಪ್ ಕರ್ಕೆರಾ( ಯುವ ಕಾಂಗ್ರೆಸ್ ಕಾರ್ಯದರ್ಶಿ) ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡ ಪ್ರತಿಭಟಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts