ಬಂಟ್ವಾಳ

ನೆರೆಯ ಪ್ರಮಾಣ ಇಳಿಮುಖ, ಬಂಟ್ವಾಳದ ಜನತೆ ಸದ್ಯಕ್ಕೆ ನಿರಾಳ

ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೆ ವಿರಾಮ ಪಡೆಯಿತು. ಅದೇ ರೀತಿ ಘಟ್ಟದ ತಪ್ಪಲಲ್ಲೂ ಮಳೆ ಇಳಿಮುಖವಾಗಿ ನೀರಿನ ಹರಿವು ಕೊಂಚ ಕಡಿಮೆಯಾದ ಕಾರಣ ಬಂಟ್ವಾಳದಲ್ಲಿ ಅಪಾಯದ ಮಟ್ಟ ಮೀರಿ (10.4 ಮೀಟರ್ ) ಹರಿಯುತ್ತಿದ್ದ ನೇತ್ರಾವತಿ ನದಿ ಬುಧವಾರ ಬೆಳಗ್ಗೆ ಇಳಿಮುಖವಾಯಿತು. ಬೆಳಗ್ಗಿನ ಹೊತ್ತಿಗೆ 9.6ರ ಆಸುಪಾಸಿಗೆ ಹರಿಯುತ್ತಿದ್ದ ನದಿ, ಮಧ್ಯಾಹ್ನದ ವೇಳೆಗೆ 8.5 ಮೀಟರ್ ಎತ್ತರದಲ್ಲಿ ಹರಿತಯುತ್ತಿತ್ತು.

ಜಾಹೀರಾತು

ಸಂಜೆಯ ವೇಳೆ ತುಂತುರು ಮಳೆ ಗಾಳಿಯೊಂದಿಗೆ ಬೀಸುತ್ತಿದ್ದು, ಯಾವುದೇ ಅಪಾಯ ಸಂಭವಿಸಿದರೆ, ತಾಲೂಕು ಆಡಳಿತ ಎದುರಿಸಲು ಸನ್ನದ್ಧವಾಗಿದೆ. ಮಂಗಳವಾರ ರಾತ್ರಿ ಈ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿದ್ದೇವೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಈಗಾಗಲೇ ಮೂರು ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಶಾರದಾ ಪ್ರೌಢಶಾಲೆ, ಹಳೇ ಐಬಿ ಮತ್ತು ನಾವೂರುಗಳಲ್ಲಿ ಗಂಜಿಕೇಂದ್ರವಿದ್ದು, ತಾಲುಕು ಆಡಳಿತ ಸಕಲ ನೆರವು ನೀಡಲು ತಯಾರಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆದರೂ ಬಂಟ್ವಾಳ ಪ್ರದೇಶದ ನದಿ ತೀರದ ಜಾಗಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಆಲಡ್ಕ, ಕಂಚಿಕಾರಪೇಟೆಗಳಲ್ಲಿ ನದಿಯಿಂದ ನೀರು ತೀರಪ್ರದೇಶಗಳ ಪಕ್ಕದಲ್ಲೇ ಹರಿಯುತ್ತಿದ್ದು, ಮತ್ತೆ ಗಾಳಿ ಮಳೆ ಶುರುವಾದರೆ ಸಮಸ್ಯೆ ಉಂಟಾಗಬಹುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ