ರೋಟರಿ ಕ್ಲಬ್ ಬಂಟ್ವಾಳ ಟೌನ್ ಆನ್ಸ್ ಕ್ಲಬ್ ಅಧ್ಯಕ್ಷರಾದ ಪಲ್ಲವಿ ಕಾರಂತ್ ದಂಪತಿಗೆ ಸನ್ಮಾನ ಸಮಾರಂಭ ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ ನಡೆಯಿತು.
ಸಾಹಿತ್ಯ ಲೋಕದಲ್ಲಿ ಕವಯಿತ್ರಿ ಪಲ್ಲವಿ ಕಾರಂತ್ ತನ್ನ ಪಯಣ ,ಲಯ ಕವನ ಸಂಕಲನದ ಮೂಲಕ ಕೃತಿ ರಚನೆಯ ಪಯಣ ಆರಂಭಿಸಿರುವ ಉದಯೋನ್ಮುಖ ಯುವ ಪ್ರತಿಭೆ. ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಪಲ್ಲವಿ ಕಾರಂತರಿಗೆ ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಸನ್ಮಾನ ವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಗೋಪಾಲ್ ಅಂಚನ್ ನೆರವೇರಿಸಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ, ನಿಕಟ ಪೂರ್ವ ಅಧ್ಯಕ್ಷ ರಾದ ಚಂದ್ರಹಾಸ ಶೆಟ್ಟಿ , ಸಾರ್ಜಂಟ್ ಗಣೇಶ್ ಸಾಲಿಯಾನ್, ರೋಟರಿ ವಲಯ 4ರ ಕಾರ್ಯದರ್ಶಿ ನಾರಾಯಣ ಹೆಗ್ಡೆ, ವಲಯ ಸೇನಾನಿ ಸಂಜೀವ ಪೂಜಾರಿ ಗುರುಕೃಪ, ರೋಟರಿ ಆನ್ಸ್ ಕ್ಲಬ್ ನೂತನ ಅಧ್ಯಕ್ಷರಾದ ಆಶಾಮಣಿ ಡಿ ರೈ, ಕಾರ್ಯ ದರ್ಶಿ ವಿಂದ್ಯಾ ಎಸ್ ರೈ ಉಪಸ್ತಿತರಿದ್ದರು.