ನೂತನ ತುಂಬೆ ವೆಂಟೆಡ್ ಡ್ಯಾಂನಲ್ಲಿ 2018 ಜನವರಿಯಿಂದ 6 ಮೀ.ನೀರು ಸಂಗ್ರಹಿಸಿದಂದಿನಿಂದ ಮುಳುಗಡೆ ಭೂಮಿಯ ರೈತರಿಗೆ ಸೂಕ್ತ ಪರಿಹಾರ ನೀಡದಿರುವ ಬಗ್ಗೆ ತಂಬೆ ವೆಂಟೆಡ್ ಡ್ಯಾಂ ಸಂತ್ರಸ್ಥರ ಹೋರಾಟ ಸಮಿತಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ನೇತೃತ್ವದ ರೈತ ಮುಖಂಡರ ನಿಯೋಗ ಜಿಲ್ಲಾಧಿಕಾರಿಯವರ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿ ಸಲ್ಲಿಸಿದೆ.
ಕಳೆದ ಬಾರಿ 5 ಮೀ.ನೀರು ಸಂಗ್ರಹದ ಸಮಯದಲ್ಲೂ ಮುಳುಗಡೆ ಪ್ರದೇಶದ ರೈತರಿಗೆ ನೆಲಬಾಡಿಗೆ ನೀಡುವಾಗಲೂ ತಾರತಮ್ಯ ನೀತಿ ಅನುಸರಿಸಲಾಗಿದೆ.ಈ ಬಾರಿ ತಾರತಮ್ಯ ರಹಿತವಾಗಿ, ವರತೆ ಸೇರಿ ನ್ಯಾಯೋಚಿತ ಪರಿಹಾರವನ್ನು ನೀಡಿ ರೈತರ ಹಿತ ಕಾಪಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭ ರೈತ ಮುಖಂಡರಾದ ಶ್ರೀಧರ ಶೆಟ್ಟಿ, ಸುಬ್ರಹ್ಮಣ್ಯ ಶಾಸ್ತ್ರಿ, ವಾಸುದೇವ ಮಯ್ಯ, ಮುರುವ ಮಹಾಬಲ ಭಟ್, ಎನ್.ಕೆ.ಇದ್ದಿನಬ್ಬ, ವಿಕ್ಟರ್ ಮಾರ್ಟಿಸ್, ಸುದೇಶ್ ಮಯ್ಯ ಮೊದಲಾದವರಿದ್ದರು.