ಬಂಟ್ವಾಳ

ಬಂಟ್ವಾಳ: ಮಳೆಗೆ ಹಲವೆಡೆ ಹಾನಿ

ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಹಲವೆಡೆ ಹಾನಿಗಳಾಗಿವೆ. ಕರಿಯಂಗಳ ಗ್ರಾಮದ ಕಿನ್ನಿಗುಡ್ಡೆ ಎಂಬಲ್ಲಿ ಹೊನ್ನಯ್ಯ ಎಂಬವರ ಪತ್ನಿ ಮಂಜು ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಸುಮಾರು50 ಸಾವಿರದಷ್ಟು ನಷ್ಟ ಉಂಟಾಗಿದೆ.

ಜಾಹೀರಾತು

ಬಿ.ಮೂಡ ಗ್ರಾಮದ ಶಿವಯ್ಯ ಎಂಬವರ ಮಗ ಸಾಧು ಎಂಬವರ ಮನೆಗೆ ಹತ್ತಿರದ ಆವರಣ ಗೋಡೆ ಬಿದ್ದು  ನಷ್ಟ ಉಂಟಾಗಿದೆ. ಬಿ ಮೂಡ ಗ್ರಾಮದ ಕಡಪಿಕರಿಯ ಎಂಬಲ್ಲಿ ಮೋನಪ್ಪ ಎಂಬವರ ಮಗ ಭಾಸ್ಕರ ಎಂಬವರ ಮನೆಯ ಅವರಣ ಗೊಡೆ ಬಿದ್ದು ಜರಿದು ಮನೆ ಜಕಂ ಹಾಗೂ ಅಡಿಕೆ ಮರಕ್ಕೆ ಹಾನಿ ಉಂಟಾಗಿದ್ದು ಸುಮಾರು 50 ಸಾವಿರ ರೂ ನಷ್ಟ ಉಂಟಾಗಿದೆ.

ಜಾಹೀರಾತು

ಬಿ ಮೂಡ ಗ್ರಾಮದ ಪಲ್ಲಮಜಲು ಸುಧಾಕರ್ ಎಂಬವರ ಹೆಂಡತಿ ವಿದ್ಯಾ ಎಂಬವರ ಅವಾರಣ ಗೋಡೆ ಬಿದ್ದು 50 ಸಾವಿರ ರೂ ನಷ್ಟ ಉಂಟಾಗಿದೆ. ಅಬ್ಲುಲ್ ಲತೀಪ್ ನಂದರಬೆಟ್ಟು ಮನೆಗೆ ಆವರಣ ಗೋಡೆ ಕುಸಿದಿದೆ.

ಘಟನಾ ಸ್ಥಳಗಳಿಗೆ ಪ್ರತ್ಯೇಕವಾಗಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಶಿವಾನಂದ ನಾಟೇಕಾರ್, ಸಿಬ್ಬಂದಿಗಳಾದ ಅಶೋಕ್, ರೂಪೇಶ್ ಕರಿಯಂಗಳ, ಸದಾಶಿವ ಕೈಕಂಬ’ ಅಶೋಕ್’ ಶೀತಲ್, ಚಂದ್ರಶೇಖರ್ ಭೇಟಿ ನೀಡಿ ಸ್ಥಳ ಮಹಜರು ಮಾಡಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ