ಎಸ್ಕೆಎಸ್ಸೆಸ್ಸೆಫ್ ನೇರಳಕಟ್ಟೆ-ಕೊಡಾಜೆ ಶಾಖಾ ವತಿಯಿಂದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮವು ರವಿವಾರ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.
ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಹಾಜಿ ಪಿ.ಕೆ.ಆದಂ ದಾರಿಮಿ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್ ಅಧ್ಯಕ್ಷತೆ ವಹಿಸಿದ್ದರು.
ಮಸೀದಿ ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ, ಪ್ರದಾನ ಕಾರ್ಯದರ್ಶಿ ಹಾಜಿ ಎಸ್.ಎಂ. ಮುಹಮ್ಮದ್ ರಫೀಕ್, ಕಾರ್ಯದರ್ಶಿ ಹಮೀದ್ ಪರ್ಲೊಟ್ಟು, ಕೋಶಾಧಿಕಾರಿ ಪಿ.ಕೆ. ಅಬ್ಬಾಸ್ ಪರ್ಲೊಟ್ಟು, ಅಬ್ದುಲ್ ಖಾದರ್ ಮೌಲವಿ, ಅಶ್ರಫ್ ಮೌಲವಿ, ಇಸಾಕ್ ಕೌಸರಿ, ಎನ್.ಕೆ.ಕಾಸಿಂ ಭಗವಂತಕೋಡಿ, ಹಾಜಿ ಮುಹಮ್ಮದ್ ನೆಡ್ಯಾಲ್, ಸಮದ್ ಬಾಯಿ ಭಗವಂತಕೋಡಿ, ತರ್ಬಿಯತುಲ್ ಇಸ್ಲಾಂ ಮದರಸ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಹೀಂ ಕೊಡಾಜೆ ಮೊದಲಾದವರು ಭಾಗವಹಿಸಿದ್ದರು.
ಎಸ್ಕೆಎಸ್ಸೆಸ್ಸೆಫ್ ನೇರಳಕಟ್ಟೆ ಶಾಖಾಧ್ಯಕ್ಷ ಹಾಜಿ ಇಬ್ರಾಹಿಂ ಪಂತಡ್ಕ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ, ಪದಾಧಿಕಾರಿಗಳಾದ ಶಾಹುಲ್ ಹಮೀದ್ ಎನ್.ಎ., ಅಬ್ದುಲ್ ಅಝೀಝ್ ಎನ್.ಎ., ಆಸೀಫ್ ನೇರಳಕಟ್ಟೆ, ಕಬೀರ್, ಇಸ್ಮಾಯಿಲ್ ನೆಢ್ಯಾಲ್, ಉಸ್ಮಾನ್ ನೆಡ್ಯಾಲ್, ಸವಾದ್ ನೇರಳಕಟ್ಟೆ, ಜುನೈದ್ ನೇರಳಕಟ್ಟೆ, ಝಕರಿಯ ಪಂತಡ್ಕ, ಅಬ್ದುಲ್ ರಹ್ಮಾನ್ ಫೈಝಿ, ಅಬ್ದುಲ್ ಖಾದರ್, ಮನ್ಸೂರ್ ಮೊದಲಾದವರು ಉಪಸ್ತಿತರಿದ್ದರು. ಡಾ. ಇ.ಕೆ.ಎ.ಸಿದ್ದೀಕ್ ಅಡ್ಡೂರ್ ಮತ್ತು ತಂಡದವರು ಸುನ್ನತ್ ಕಾರ್ಯಕ್ರಮ ನಡೆಸಿಕೊಟ್ಟರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ