ಕಲ್ಲಡ್ಕ

ಕಲ್ಲಡ್ಕ, ವಿಟ್ಲದಲ್ಲಿ ಸಿಪಿಎಂಎಫ್ ಪಥಸಂಚಲನ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಸುರಕ್ಷತೆಗಾಗಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಮತ್ತು ವಿಟ್ಲಗಳಲ್ಲಿ ಸಿಪಿಎಂಎಫ್ – ಸುರಕ್ಷಾ ಸೀಮಾ ಬಲ ತುಕಡಿ ಹಾಗೂ ಬಂಟ್ವಾಳ ಪೊಲೀಸರು ಪಥಸಂಚಲನ ನಡೆಸಿದರು.

ಜನರಲ್ಲಿ ಚುನಾವಣೆ ಕುರಿತು ಧೈರ್ಯ ಮೂಡಿಸುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷವಾಗಿ ಬ್ಯಾಂಡ್, ವಾದ್ಯ ಮೇಳವು ಜೊತೆಯಲ್ಲಿ ಸಾಗಿತ್ತು. ಕೆ.ಸಿ.ರೋಡಿನಿಂದ ಹೊರಟು ಕಲ್ಲಡ್ಕ ಪೇಟೆಯಾಗಿ ಗೋಳ್ತಮಜಲು ವರೆಗೆ ಸಾಗಿ ವಾಪಾಸು ಕಲ್ಲಡ್ಕ ಕ್ಕೆ ಪಥಸಂಚಲನ ನಡೆಸಲಾಯಿತು.

ಜಾಹೀರಾತು

ಈ ಸಂದರ್ಭ ಸುರಕ್ಷಾ ಸೀಮಾ ಬಲದ ಕಮಾಂಡ್ ದೀರಜ್ , ಎಡಿಶನಲ್ ಎಸ್ಪಿ ಸಜಿತ್, ಪ್ರೋಬೆಶನರಿ ಐಪಿಎಸ್ ಅಧಿಕಾರಿ ಅಕ್ಷಯ್ ಎಮ್ ಹಾಕೆ, ಡಿ.ವೈ.ಎಸ್.ಪಿ.ಶ್ರೀ ನಿವಾಸ್,  ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಕುಮಾರ್, ನಗರ ಠಾಣಾ ಎಸ್.ಐ.ಚಂದ್ರಶೇಖರ್,  ಅಪರಾಧ ವಿಭಾಗದ ಎಸ್.ಐ.ಹರೀಶ್, ಟ್ರಾಫಿಕ್ ಪೋಲೀಸ್ ಎಸ್. ಐ.ಯಲ್ಲಪ್ಪ ಮತ್ತು ಬಂಟ್ವಾಳ ವೃತ್ತಕ್ಕೆ ಒಳಪಟ್ಟ ಪೊಲೀಸ್ ಸಿಬ್ಬಂದಿ ಸೇರಿ ಸುಮಾರು 180 ಮಂದಿ ಪಥಸಂಚಲನ ನಡೆಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ