ಬಂಟ್ವಾಳ

ಬಂಟ್ವಾಳ ತಾಲೂಕು ಪಿಂಚಣಿದಾರರ ಸಭೆ

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ ಇತ್ತೀಚೆಗೆ ಬಿ.ಸಿ.ರೋಡಿನ ಸರಕಾರಿ ನೌಕರರ ಭವನದ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಳೆದ ಸಭೆಯ ವರದಿಯನ್ನು ಕಾರ್ಯದರ್ಶಿ ಕೆ.ನೀಲೋಜಿರಾವ್ ಸಭೆಯಲ್ಲಿ ಮಂಡಿಸಿದರು. ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಮಂಡಿಸಿದರು.

ಜಾಹೀರಾತು

ಚಾಲ್ತಿ ವರ್ಷದ ಸಂಘದ ವಾರ್ಷಿಕ ಮಹಾಸಭೆಯನ್ನು ಇದೇ ವರ್ಷದ ಏಪ್ರಿಲ್ 10ರಂದು ತಾಲೂಕು ಸರಕಾರಿ ನೌಕರರ ಭವನದ ಹೊಸ ಸಭಾಂಗಣದಲ್ಲಿ ಗಣ್ಯವಕ್ತಿಗಳಾದ ವಿಶ್ವನಾಥ ಮತ್ತು ಸುಂದರ ಅವರನ್ನು ಆಮಂತ್ರಿಸಿ ನಡೆಸುವುದು ಎಂದು ತೀರ್ಮಾನಿಸಲಾಯಿತು. ಸಮಾರಂಭದಲ್ಲಿ ೭೫ ತುಂಬಿದ ಸುಮಾರು ೧೩ ಹಿರಿಯ ಸದಸ್ಯರನ್ನು ಸನ್ಮಾನಿಸುವುದು ಎಂದು ತೀರ್ಮಾನಿಸಲಾಯಿತು. ಹೊಸದಾಗಿ ಸೇರ್ಪಡೆಗೊಂಡ ಸಂಕಪ್ಪ ಶೆಟ್ಟಿ ಮತ್ತು ಸೋಮಪ್ಪ ಮೂಲ್ಯ ಅವರನ್ನು ಅಧ್ಯಕ್ಷರು ಗೌರವದೊಂದಿಗೆ ಸ್ವಾಗತಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಎ.ಲಿಂಗಪ್ಪ, ಎನ್. ಕೃಷ್ಣರಾಜ ಶೆಟ್ಟಿ, ವಿ.ಸೋಮಪ್ಪ, ಸದಸ್ಯರಾದ ಲೋಕನಾಥ ಶೆಟ್ಟಿ, ಚಂದು ನಾಕ, ಕೆ.ರಮೇಶ ಭಟ್, ಬಿ.ಚಂದ್ರಶೇಖರ ಗಟ್ಟಿ, ಎಂ.ದಿನಕರ, ರಾಘವನ್ ನಾಯರ್, ಅಬ್ದುಲ್ ಸಲಾಮ್, ಎನ್. ಶಿವಶಂಕರ್, ಸುಂದರ ಮೂಲ್ಯ, ಪದ್ಮನಾಭ ರಾವ್, ಕೆ.ಆರ್.ಪುತ್ತೂರಾಯ, ಶೇಷಪ್ಪ ಮೂಲ್ಯ, ಸಂಕಪ್ಪ ಶೆಟ್ಟಿ, ಸೋಮಪ್ಪ ಮೂಲ್ಯ ಉಪಸ್ಥಿತರಿದ್ದರು. ನೀಲೋಜಿರಾವ್ ಸ್ವಾಗತಿಸಿದರು. ಎ.ದಾಮೋದರ ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ