ಬಂಟ್ವಾಳ

ಬಂಟ್ವಾಳ ಪರಿವರ್ತನೆಗೆ ಬಿಜೆಪಿ ನಡಿಗೆ – 14ರಿಂದ 26ವರೆಗೆ ಗ್ರಾಮಭೇಟಿ

www.bantwalnews.com

ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ನೇತೃತ್ವದಲ್ಲಿ ಜನವರಿ 14ರಿಂದ 26ವರೆಗೆ ಪರಿವರ್ತನೆಗೆ ನಮ್ಮ ನಡಿಗೆ ಪರಿಕಲ್ಪನೆಯಡಿ ಬಂಟ್ವಾಳ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ ಏರ್ಪಡಿಸಲಾಗಿದೆ.

ಜಾಹೀರಾತು


ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆತರಲು ಹಾಗೂ ಬಂಟ್ವಾಳ ಕ್ಷೇತ್ರವನ್ನುಕಾಂಗ್ರೆಸ್ ಮುಕ್ತಗೊಳಿಸುವ ಸಲುವಾಗಿ ಈ ನಡಿಗೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

14ರಂದು ಅರಳದಲ್ಲಿ ಮಧ್ಯಾಹ್ನ 2 ಗಂಟೆಗೆ ಜಾಥಾಕ್ಕೆ ಸಂಸದ ನಳಿನ್ ಕುಮಾರ್‌ ಕಟೀಲ್ ಚಾಲನೆ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಉದ್ಫಾಟನಾ ಸಭೆ ನಡೆಯಲಿದೆ. ಈ ಸಂದರ್ಭ ರಾಜ್ಯ ಮತ್ತು ಜಿಲ್ಲೆಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಬಳಿಕ 26ವರೆಗೆ ಕ್ಷೇತ್ರದ 59 ಗ್ರಾಮಗಳಿಗೆ 12 ದಿನಗಳ ಕಾಲ ಜಾಥಾ ಸಂಚರಿಸಲಿದ್ದು, ಪ್ರತಿದಿನವೂ ಸಂಜೆ ಸಭಾಕಾರ್ಯಕ್ರಮ ನಡೆಯಲಿದೆ.

ಜನವರಿ 26ರ ಸಂಜೆ 3 ಗಂಟೆಗೆ ಬಿ.ಸಿ.ರೋಡಿನಲ್ಲಿ ಪಾದಯಾತ್ರೆಯ ಸಮಾರೋಪ ನಡೆಯಲಿದೆ.ರಾಜ್ಯದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅಥವಾ ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಜಾಹೀರಾತು

ಜಾಥಾ ಹೀಗೆ ಸಂಚರಿಸಲಿದೆ..

  • 14 – ಅರಳದಿಂದ ಹೊರಟು ಕರ್ಪೆ
  • 15 – ಕರ್ಪೆಯಿಂದ ಹೊರಟು ಸಂಗಬೆಟ್ಟು, ಎಲಿಯನಡುಗೋಡು, ಕುಕ್ಕಿಪ್ಪಾಡಿ, ರಾಯಿ
  • 16 – ರಾಯಿಯಿಂದ ಹೊರಟು ಕೊಯಿಲ, ಪಂಜಿಕಲ್ಲು, ಮೂಡನಡುಗೋಡು, ಬುಡೋಳಿ, ಪಿಲಿಮೊಗರು, ಚೆನ್ನೈತೋಡಿ, ಅಜ್ಜಿಬೆಟ್ಟು.
  • 17 – ವಗ್ಗದಿಂದ ಹೊರಟು ಕೊಡಂಬೆಟ್ಟು, ಕಾಡಬೆಟ್ಟು, ಕಾವಳಪಡೂರು, ಕಾವಳಮುಡೂರು, ಮೂಡುಪಡುಕೋಡಿ, ಇರ್ವತ್ತೂರು, ಪಿಲಾತಬೆಟ್ಟು
  • 18 – ಪುಂಜಾಲಕಟ್ಟೆಯಿಂದ ಹೊರಟು ಬಡಗಕಜೆಕಾರು, ತೆಂಕಕಜೆಕಾರು, ಉಳಿ, ಮಣಿನಾಲ್ಕೂರು, ದೇವಸ್ಯಮುಡೂರು
  • 19 – ಮುಲ್ಕಾಜೆಮಾಡದಿಂದ ಹೊರಟು ದೇವಸ್ಯಪಡೂರು, ನಾವೂರು, ಸರಪಾಡಿ
  • 20 – ಕಡೇಶ್ವಾಲ್ಯದಿಂದ ಹೊರಟು ಬರಿಮಾರು, ಪೆರಾಜೆ, ಮಾಣಿ, ನೆಟ್ಲಮುಡ್ನೂರು, ಅನಂತಾಡಿ, ವೀರಕಂಭ
  • 21 – ವೀರಕಂಭದಿಂದ ಹೊರಟು ವಿಟ್ಲಪಡ್ನೂರು, ಕೊಳ್ನಾಡು, ಕನ್ಯಾನ, ಕರೋಪಾಡಿ
  • 22 – ಸಾಲೆತ್ತೂರಿನಿಂದ ಹೊರಟು ಮಂಚಿ, ಬೋಳಂತೂರು, ಅಮ್ಟೂರು, ಗೋಳ್ತಮಜಲು
  • 23 – ಕಲ್ಲಡ್ಕದಿಂದ ಹೊರಟು ಬಾಳ್ತಿಲ, ಶಂಭೂರು, ನರಿಕೊಂಬು, ಪಾಣೆಮಂಗಳೂರು, ಸಜಿಪಮೂಡ, ಸಜಿಪಮುನ್ನೂರು.
  • 24 – ಬೆಂಜನಪದವಿನಿಂದ ಹೊರಟು ಕಳ್ಳಿಗೆ, ಅಮ್ಮುಂಜೆ, ಕರಿಯಂಗಳ
  • 25 – ಪೊಳಲಿಯಿಂದ ಹೊರಟು ಬಡಗಬೆಳ್ಳೂರು, ತೆಂಕಬೆಳ್ಳೂರು, ಕುರಿಯಾಳ, ಅಮ್ಟಾಡಿ
  • 26 – ಅಮ್ಟಾಡಿಯಿಂದ ಹೊರಟು ಬಂಟ್ವಾಳ ಕಸಬಾ, ಬಿ.ಮೂಡ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರಾಜೇಶ್ ನಾಯಕ್ ಉಳಿಪ್ಪಾಡಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಪುರಸಭೆ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಎಸ್.ಸಿ ಎಸ್.ಟಿ. ಮೋರ್ಚಾ ಅಧ್ಯಕ್ಷ ದಿನೇಶ್‌ ಅಮ್ಟೂರು, ಪ್ರಮುಖರಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ದೇವಪ್ಪ ಪೂಜಾರಿ, ಸೀತಾರಾಮ ಪೂಜಾರಿ, ರಮಾನಾಥ ರಾಯಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ