ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷರಾಗಿ ಉದ್ಯಮಿ ರಘು ಸಫಲ್ಯ ಆಯ್ಕೆಯಾಗಿದ್ದಾರೆ. ಪಾಣೆಮಂಗಳೂರಿನ ಸುಮಂಗಲಾ ಕಲ್ಯಾಣಮಂಟಪದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನರ್ಸಪ್ಪ ಅಮೀನ್, ತಿಮ್ಮಪ್ಪ ಸಪಲ್ಯ ಇಡ್ಕಿದು, ನಾಗೇಶ್ ಕಲ್ಲಡ್ಕ, ಕುಸುಮಾ ವಿಶ್ವನಾಥ, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಬಂಗೇರ ಬೋಳಂತೂರು, ಜೊತೆ ಕಾರ್ಯದರ್ಶಿಯಾಗಿ ಲತಾ ಮೇಲ್ಕಾರ್, ಕಮಲಾಕ್ಷ ಶಂಭೂರು, ಕೋಶಾಧಿಕಾರಿಯಾಗಿ ಸಂದೀಪ್ ನಾಗನವಳಚ್ಚಿಲ್ ಆಯ್ಕೆಯಾದರು. ಅಶೋಕ್ ಕುಮಾರ್ ಸ್ವಾಗತಿಸಿದರು. ವೇದವ ವರದಿ ವಾಚಿಸಿದರು. ತಿಮ್ಮಪ್ಪ ಸಪಲ್ಯ, ಪೂವಪ್ಪ ದರಿಬಾಗಿಲು, ಈಶ್ವರ ಮೇಲ್ಕಾರ್ ಉಪಸ್ಥಿತರಿದ್ದರು.