ವಾಹನ ಚಾಲಕರು ಎಷ್ಟು ಜಾಗ್ರತೆ ಇದ್ದರೂ ಅಪಘಾತಗಳು ನಡೆಯುವ ಮಂಗಳೂರಿನ ನಂತೂರು ಜಂಕ್ಷನ್ ನಲ್ಲಿ ಮತ್ತೊಂದು ಅಪಘಾತ ಗುರುವಾರ ಬೆಳಗ್ಗೆ ಸಂಭವಿಸಿದೆ. ಸಿಟಿ ಬಸ್ಸೊಂದು ಕಂಟೈನರ್ ಗೆ ಗುದ್ದಿದ ಪರಿಣಾಮ, ಕಂಟೈನರ್ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಮಹಿಳೆ ಕವಿತಾ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಟ್ಟು 14 ಮಂದಿ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗ್ಗೆ ಸುಮಾರು ಏಳೂವರೆ ಗಂಟೆಯ ವೇಳೆ ಅಪಘಾತ ಸಂಭವಿಸಿದೆ. ನಂತೂರು ಜಂಕ್ಷನ್ ಹಲವು ಅಪಘಾತಗಳಿಗೆ ಸಾಕ್ಷಿಯಾಗಿದ್ದು, ಅದರ ಸಾಲಿಗೆ ಗುರುವಾರದ ದುರಂತ ಘಟನೆ ಸೇರಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…