ವಿಟ್ಲ

ಪ್ರಪಾತಕ್ಕೆ ಉರುಳಿದ ರಿಕ್ಷಾ ನಾಲ್ವರಿಗೆ ಗಾಯ

https://bantwalnews.com  ವರದಿ

ಜಾಹೀರಾತು

ಜನರಿಂದ ತುಂಬಿಕೊಂಡಿದ್ದ ರಿಕ್ಷಾವೊಂದನ್ನು ರಸ್ತೆ ಬದಿ ನಿಲ್ಲಿಸಿದ್ದ ಸಂದರ್ಭ ಇದ್ದಕ್ಕಿದ್ದಂತೆ ಚಲಿಸಿ ಪ್ರಪಾತಕ್ಕೆ ಉರುಳಿದ ಘಟನೆ ಮಂಗಳವಾರ ಪಡಿಬಾಗಿಲು ಜಂಕ್ಷನ್ ನಲ್ಲಿ ಮಂಗಳವಾರ ನಡೆದಿದೆ.

ಮುಳಿಯ ಮೂಲದ ವಿಶ್ವನಾಥ ಎಂಬವರು ಚಲಾಯಿಸುತ್ತಿದ್ದ ರಿಕ್ಷಾದಲ್ಲಿ ಸುಮಾರು 6 ಮಂದಿ ಪ್ರಯಾಣಿಕರಿದ್ದರು. ಪಡಿಬಾಗಿಲು ಜಂಕ್ಷನ್ ನಲ್ಲಿ ಮಹಿಳೆಯೊಬ್ಬರು ಅಂಗಡಿಯಿಂದ ಸಾಮಾನು ಖರೀದಿಗೆಂದು ನಿಲ್ಲಿಸಿಲು ಹೇಳಿದ್ದರು. ಚಾಲಕನೂ ರಿಕ್ಷಾದಿಂದ ಇಳಿದ ಸಮಯದಲ್ಲಿ ಇದ್ದಕ್ಕಿಂದಂತೆ ಚಲಾಯಿಸಿದ ರಿಕ್ಷಾ ರಸ್ತೆ ಬದಿಯ ತಡೆಗೋಡೆಯಿಂದ ಸುಮಾರು 20 ಅಡಿ ಆಳದ ಕಂಡಕಕ್ಕೆ ಉರುಳಿತು.

ನಿಕ್ಕಿತಪುಣಿ ಪ್ರಣಮ್ಯ, ಎರುಂಬು ಈಶ್ವರ ಮೂಲ್ಯ, ಎರುಂಬು ರತ್ನ ಮತ್ತು ಇನ್ನೊಬ್ಬರು ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿದ್ದಾರೆ.

ಪ್ರಪಾತದಲ್ಲಿ ಚರಂಡಿ ಒಳಗೆ ಸಿಲುಕಿದ್ದ ಜನರನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲೆತ್ತಿದ್ದಾರೆ. ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವರು ಪ್ರಥಮ ಚಿಕಿತ್ಸೆ ಪಡೆದು ಮಂಗಳೂರು ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.