ತುಡರ್ ಚಾರಿಟೇಬಲ್ ಟ್ರಸ್ಟ್ ಇದರ ಹತ್ತನೆಯ ಯೋಜನೆಯ ನೆರವನ್ನು ಬಿ.ಸಿ. ರೋಡ್ ಚಿಕ್ಕಯ್ಯ ಮಠದ ನಿವಾಸಿ ಮಾನಸಿಕ ಅಸ್ವಸ್ಥೆ 37 ವರುಷ ಪ್ರಾಯದ ಕವಿತರವರ ಚಿಕಿತ್ಸೆಗಾಗಿ ಧನಸಹಾಯ ಮಾಡಲಾಯಿತು.
20 ಸಾವಿರ ರೂಪಾಯಿಯನ್ನು ಸುರೇಶ್ ಸಾಲ್ಯನ್ ಮೇಮ್ ಸಾಬ್ ಇವರ ಮನವಿ ಮೇರೆಗೆ, ಸೌಮ್ಯ ಸುಕುಮಾರ್ ಮತ್ತು ಯಶೋಧರ ಶೆಟ್ಟಿ ಇವರ ಮುಖಾಂತರ ಹಸ್ತಾಂತರಿಸಲಾಯಿತು. ತುಡರ್ ಚಾರಿಟೇಬಲ್ ಟ್ರಸ್ಟ್ ನ ಅನಿತ, ಮನಿಷ, ನಾರಾಯಣ ಪೆರ್ನೆ, ಸುಕುಮಾರ್ ಬಂಟ್ವಾಳ, ಪ್ರಸನ್ನ, ಪ್ರದೀಪ್ ಪೂಜಾರಿ , ಜಯರಾಜ್ ಎಸ್ ಬಂಗೇರ ಉಪಸ್ಥಿತರಿದ್ದರು.