ವಿಟ್ಲ

ಸಹಜವಾದ ವಚನಗಳು ಧರ್ಮಜ್ಞಾನದ ಮೂಲ

www.bantwalnews.com

ಕೃತಕವಲ್ಲದ ಸಹಜವಾದ ವಚನಗಳು ಧರ್ಮಜ್ಞಾನದ ಮೂಲವಾಗಿದೆ. ವೇದ ಹಾಗೂ ದೇವದಲ್ಲಿ ವ್ಯತ್ಯಾಸವೇನಿಲ್ಲ. ವೇದ ತ್ರಿಗುಣಾತೀತನ ಅನುಸಂಧಾನ ಮಾಡುತ್ತದೆ. ವೇದಗಳಿಗೂ ದೇವನಿಗೂ ಆದಿ, ಅಂತ್ಯಗಳಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ವ್ಯಾಖ್ಯಾನಿಸಿದರು.

ಜಾಹೀರಾತು

ಹಾರಕರೆ ನಾರಾಯಣ ಭಟ್ ಅವರ ಮನೆಯಲ್ಲಿ ಕಲಾರಾಮ ವಿಭಾಗದ ಆಶ್ರಯದಲ್ಲಿ ಏಕಾದಶಿಯಂದು ಶಿಷ್ಯರೊಡಗೂಡಿ ಆಯೋಜಿಸುವ ಸತ್ಸಂಗಮಾಲಿಕೆ ರಾಮಪದ ಕಾರ್ಯಕ್ರಮದಲ್ಲಿ ವೇದಗಳ ಸಾರದ ಬಗ್ಗೆ ಪ್ರವಚನ ನೀಡಿದರು.

ದೈವ ಕೃಪೆಯಿಂದ ಮೂರು ಜನ್ಮಗಳನ್ನು ಪಡೆದ ಭರಧ್ವಾಜರು ವೇದಗಳ ಅಧ್ಯಯನವನ್ನೇ ಮಾಡಿದ್ದರು. ಮೂರನೇ ಜನ್ಮದ ಕೊನೆಯ ಹಂತದಲ್ಲಿ ಇಂದ್ರ ದೇವರು ಪ್ರತ್ಯಕ್ಷವಾಗಿ ಇನ್ನೊಂದು ಜನ್ಮ ನೀಡುವ ವರ ನೀಡಿದಾಗಲೂ ಭರಧ್ವಾಜರು ಬ್ರಹ್ಮಚರ್ಯ ಮತ್ತು ವೇದಾಧ್ಯಯನವನ್ನು ಮುಂದುವರಿಸುವೆ ಎಂದು ಹೇಳುತ್ತಾರೆ. ಇಂತಹ ಗೀಳು ಇರಬೇಕು ಎಂದರು.

ಜಾಹೀರಾತು

ವೇದಮೂರ್ತಿ ಶ್ರುತಿಸಾಗರ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳು, ವೇದಮೂರ್ತಿ ಪಕಳಕುಂಜ ಚಾವಡಿಬಾಗಿಲು ಶಂಭು ಭಟ್ಟರು, ವೇದಮೂರ್ತಿ ಪಳ್ಳತ್ತಡ್ಕ ಶಶಿಧರಭಟ್ಟರು, ವೇದಮೂರ್ತಿ ಮುರ ಮುಕುಂದ ಶರ್ಮಾ, ವೇದಮೂರ್ತಿ ನರಸಿಂಹ ಭಟ್ ಮಿತ್ತೂರು ವೇದಗಳನ್ನು ಪಠಿಸಿದರು. ಸಹಗಾಯನದಲ್ಲಿ ದೀಪಿಕಾ ಭಟ್, ಪೂಜಾ ಭಟ್ ಸಹಕರಿಸಿದರು. ಹಾರ್ಮೋನಿಯಂನಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಸಿತಾರ್‌ನಲ್ಲಿ ಸುಬ್ರಹ್ಮಣ್ಯ ಹೆಗಡೆ ಇದ್ದರು. ಅನುರಾಧಾ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ