ಪಾಣೆಮಂಗಳೂರು ಬಸದಿಯಲ್ಲಿ ಚಾತುರ್ಮಾಸ ಮುಗಿಸಿದ ಮುನಿಶ್ರೀ ೧೦೮ ವೀರಸಾಗರ ಮುನಿ ಮಹಾರಾಜರು ಮಂಗಳ ವಿಹಾರ ಆರಂಭಿಸಿದ್ದು ಬಂಟ್ವಾಳ ಪೇಟೆಯ ಮೂಲಕ ಪಂಜಿಕಲ್ಲಿನ ಆದಿನಾಥ ಸ್ವಾಮಿ ಬಸದಿಗೆ ಕಾಲ್ನಡಿಗೆ ಮೂಲಕ ತೆರಳಿದರು.
ಈ ಸಂದರ್ಭ ಚಾತುರ್ಮಾಸ ಸಮಿತಿಯ ಅಧ್ಯಕ್ಷ ರತ್ನಾಕರ ಜೈನ್, ಕಾರ್ಯಧ್ಯಕ್ಷ ಸುದರ್ಶನ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ವೃಷಭರಾಜ ಇಂದ್ರ, ಶ್ರೀಮಂಧರ್ ಜೈನ್ ಹಾಗೂ ಶ್ರಾವಕ ಶ್ರಾವಕಿಯರು ಮಂಗಳ ವಿಹಾರದಲ್ಲಿ ಪಾಲ್ಗೊಂಡರು.