• ಯಾದವ ಕುಲಾಲ್

www.bantwalnews.com

ಜಾಗ್ರತೆ..ಇದು ರಾಷ್ಟ್ರೀಯ ಹೆದ್ದಾರಿ 75ರ ತುಂಬೆ. ಓಡಾಡುವಾಗಲೆಲ್ಲ ಎಚ್ಚರಿಸುವುದು ಸಾಮಾನ್ಯ. ಆದರೆ ತುಂಬೆಯಲ್ಲಿ ಶಾಲಾ ಮಕ್ಕಳು ಓಡಾಡುವ ಜಾಗವೇ ಅಪಾಯದಿಂದ ಕೂಡಿದೆ.

ಜಾಹೀರಾತು

ಚಿತ್ರಗಳನ್ನು ನೋಡಿದರೆ ಯಾವುದು ಎಷ್ಟು ಅಪಾಯಕಾರಿ ಎಂಬುದು ಗೊತ್ತಾಗುತ್ತದೆ.

ಏನೆಲ್ಲ ಅಪಾಯ? ಇಲ್ಲಿ ನೋಡಿ.

ಜಾಹೀರಾತು

  • ಶಾಲಾ ಮಕ್ಕಳ ಸುರಕ್ಷತೆಗಾಗಿ ನಿರ್ಮಿಸಲ್ಪಟ್ಟ ಓವರ್ ಬ್ರಿಡ್ಜ್ ತುಕ್ಕು ಹಿಡಿಯುತ್ತಿದೆ.
  • ಓವರ್ ಬ್ರಿಡ್ಜ್ ಕಳೆಗಿಡ-ಪೊದೆಗಳಿಂದ ಆವೃತವಾಗಿದ್ದು ಸರಿಯಾದ ದಾರಿಯೇ ಕಾಣುತ್ತಾ ಇಲ್ಲ.
  • ಡಾಂಬಾರು ಕಿತ್ತು ಬಂದಿರುವ ರಸ್ತೆ. ರಸ್ತೆಯ ಪಕ್ಕದಲ್ಲಿಯೆ ಸುಮಾರು 100 ಮೀಟರ್ ಉದ್ದಕ್ಕೂ ಅರೆಬರೆ ಕಾಮಗಾರಿಯಿಂದಾಗಿ ತೆರೆದಿರುವ ಚರಂಡಿ ಕಾಣಿಸುತ್ತಿದೆ.
  • ಅಪಾಯಕಾರಿಯಾದ ಉದ್ದುದ್ದ ಸರಳುಗಳು ಅಲ್ಲಿವೆ. ರಸ್ತೆಯೂ ಬಿರುಕುಬಿಟ್ಟಿದೆ.

ಜಾಹೀರಾತು

ಇದು ಗಂಭೀರವಾದ ಸಮಸ್ಯೆ ಎನ್ನುವ ಅರಿವು ನಮಗಿದೆ. ಹಾಗಾಗಿ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಓವರ್ ಬ್ರಿಡ್ಜ್‌ನ ನಿರ್ವಹಣೆಗಾಗಿ ಪ್ರೊಪೋಸಲ್ ಕಳುಹಿಸಿದ್ದು ಅದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರುತ್ತದೆ. ಆ ನಂತರ ಓವರ್ ಬ್ರಿಡ್ಜ್‌ನ ಸ್ಥಿತಿ ಸಂಪೂರ್ಣ ಸುಧಾರಣೆಯಾಗುತ್ತದೆ. ಅದೇ ರೀತಿ ಚರಂಡಿ ಕಾಮಗಾರಿಗೂ ಟೆಂಡರ್ ಕರೆದಿದ್ದೇವೆ. ಆದಷ್ಟು ಬೇಗ ಅಪೂರ್ಣವಾಗಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಹೆದ್ದಾರಿಯ ತೊಂದರೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಜನರ ಸಮಸ್ಯೆಗೆ ನಾವು ಸದಾ ಸ್ಪಂದಿಸುತ್ತೇವೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂಜಿನಿಯರ್.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ