ಬಂಟ್ವಾಳ

ದೇಯಿ ಬೈದೆತಿಗೆ ಅವಮಾನ: ಪ್ರೇರೇಪಣೆ ನೀಡಿದವರ ಬಂಧನಕ್ಕೆ ಬಿಜೆಪಿ ಒತ್ತಾಯ

ಪುತ್ತೂರು ತಾಲೂಕಿನ ಮೂಡುಪಿನಡ್ಕದಲ್ಲಿ ಸರ್ಕಾರ ನಿರ್ಮಿಸಿದ ದೇಯಿ ಬೈದೆತಿ ಔಷ ವನದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಗೆ ಅವಮಾನ ಮಾಡಿದವರನ್ನಷ್ಟೇ ಅಲ್ಲ, ಅದಕ್ಕೆ ಪ್ರೇರೇಪಣೆ ನೀಡಿದವರನ್ನೂ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಜಾಹೀರಾತು

ಬಿ.ಸಿ.ರೋಡಿನಲ್ಲಿ ಸೋಮವಾರ ನಡೆದ ಮೆರವಣಿಗೆ ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸರಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಾಗಲಷ್ಟೇ ಸಾಮಾಜಿಕ ಸ್ವಾಸ್ಥ್ಯ ಉಳಿಯಲು ಸಾಧ್ಯ ಎಂದರು.

ವಿಕೃತ ಮನೋಸ್ಥಿತಿಯವರು ಪ್ರತಿಮೆಗೆ ಅಪಮಾನಗೊಳಿಸಿದ್ದು ಖಂಡನೀಯ, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ, ಅದನ್ನು ಇಷ್ಟಪಟ್ಟು ಲೈಕ್ ಕೊಟ್ಟವರನ್ನೂ ವಿಚಾರಣೆಗೊಳಪಡಿಸಬೇಕು ಎಂದು ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಹೇಳಿದರು.

ತುಳುನಾಡಿನ ಸಂಸ್ಕಾರ, ಸಂಸ್ಕೃತಿಯನ್ನ ಉಳಿಸಿಕೊಂಡು, ಬೆಳೆಸಿಕೊಂಡು ಭಾವನಾತ್ಮಕವಾಗಿ ಜೀವನ ಸಾಗಿಸಿಕೊಂಡು ಬಂದ ಸಮಸ್ತ ಹಿಂದೂ ಜನತೆಗೆ ಈ ಕೃತ್ಯದಿಂದ ಅಪಾರ ನೋವು ಆಗಿದೆ. ಇದನ್ನು ಇಡೀ ಹಿಂದು ಸಮಾಜ ಮತ್ತು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ. ಈ ಹೇಯ ಕೃತ್ಯದಲ್ಲಿ ಭಾಗಿಯಾದ ಮತಾಂಧರಲ್ಲಿ ಕೇವಲ ಕಾಟಾಚಾರಕ್ಕೆ ಓರ್ವ ವ್ಯಕ್ತಿಯನ್ನು ಪೋಲೀಸ್ ಇಲಾಖೆ ಬಂಧಿಸಿದ್ದು ಆತನಿಗೆ ಸಹಕರಿಸಿದ ಉಳಿದ ವ್ಯಕ್ತಿಗಳನ್ನು ಬಂಧಿಸಿ ಕಠಿನ ಕಾನೂನು ಕ್ರಮ ಜರಗಿಸಬೇಕಾಗಿಯೂ ಗರಡಿಗಳಲ್ಲಿ ಪೂಜಿಸಲ್ಪಡಬೇಕಾದ ಯುಗ ಪುರುಷ ಕೋಟಿ ಚೆನ್ನಯ ಹಾಗೂ ದೈವಾಂಶ ಸಂಭೂತೆಯಾದ ದೇಯಿ ಬೈದೆತಿಯ ಪ್ರತಿಮೆಗಳನ್ನು ಸೂಕ್ತ ರಕ್ಷಣೆ ನೀಡದೆ ಸರಿಯಾದ ಆವರಣ ಗೋಡೆಯನ್ನು ಸಹ ನಿರ್ಮಿಸದೆ ಪುತ್ತೂರು ತಾಲೂಕಿನ ಮೂಡುಪಿನಡ್ಕದ ಔಷ ವನದಲ್ಲಿ ನಿರ್ಮಿಸಿದ್ದು ಖಂಡನೀಯ ಎಂದು ಭಾಷಣಕಾರರು ಆರೋಪಿಸಿದರು.

ಜಾಹೀರಾತು

ಮಾಜಿ ಶಾಸಕ ರುಕ್ಮಯ ಪೂಜಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಭಂಡಾರಿ,ಸಂಗಬೆಟ್ಟು ಶಕ್ತಿಕೇಂದ್ರದ ಅಧ್ಯಕ್ಷರಾದ ರತ್ನ ಕುಮಾರ್ ಚೌಟ, ಸಂಗಬೆಟ್ಟು ಶಕ್ತಿಕೇಂದ್ರದ ಪ್ರಧಾನ ಕಾರ್ಯಕಾರ್ಯ ಸಂಜೀವ ಪೂಜಾರಿ ಪಿಲಿಂಗಾಲು, ಎಂ ತುಂಗಪ್ಪ ಪೂಜಾರಿ, ಪ್ರಕಾಶ್ ಅಂಚನ್, ಚೆನ್ನಪ್ಪ ಕೋಟ್ಯಾನ್, ರವೀಂದ್ರ ಕಂಬಳಿ, ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ, ದೇವಪ್ಪ ಪೂಜಾರಿ, ಸಂತೋಷ್ ರಾಯಿ, ಲಕ್ಷ್ಮೀನಾರಾಯಣ, ಕೇಶವ ಗೌಡ,ಕಮಲಾಕ್ಷಿ ಕೆ ಪೂಜಾರಿ,ಗೀತಾ ಚಂದ್ರಶೇಖರ್,ಗಣೇಶ್ ರೈ ಮಾಣಿ,ಸದಾಶಿವ ಬರಿಮಾರು,ಗಂಗಾಧರ ಕೋಟ್ಯಾನ್,ಸುಗುಣ ಕಿಣಿ,ಲಕ್ಷ್ಮೀಗೋಪಾಲಾಚಾರ್ಯ,ಜಯಂತಿ,ಕುಲ್ಯಾರು ನಾರಾಯಣ ಶೆಟ್ಟಿ,ಯಶವಂತ ಪೊಳಲಿ,ತನಿಯಪ್ಪ ಗೌಡ,ರವಿರಾಜ್ ಬಿ.ಸಿ.ರೋಡ್,ಮಚ್ಚೇಂದ್ರ ಸಾಲಿಯಾನ್,ಪುರುಷೋತ್ತಮ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಯಾದ ಸೀತಾರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ