ಬಂಟ್ವಾಳ

ಕಾರಾಜೆ ಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

ಕಾರಾಜೆ ಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

ಸಜೀಪ ಮೂಡ  ಗ್ರಾಮದ ಕಾರಾಜೆಯಾ ನೂರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ, ದಾರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ  ಪಡ್ಪು , ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರಾಜೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾರಾಜೆಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಜಾಹೀರಾತು

ನೂರುಲ್ ಹುದಾ ಜುಮಾ ಮಸ್ಜಿದ್  ಕಾರಾಜೆ :

ಮಸೀದಿಯ ಖತೀಬರಾದ ಯೂಸುಫ್ ಮದನಿ ನೇತೃತ್ವದಲ್ಲಿ ಮಸೀದಿಯ ವಠಾರದಲ್ಲಿ ಅಧ್ಯಕ್ಷರಾದ ಜನಾಬ್ . ಶೇಖಬ್ಬ ಹಾಜಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.

ನಂತರ ಮಾತನಾಡಿದ ಖತೀಬರಾದ ಯೂಸುಫ್ ಮದನಿ ಯವರು ದೇಶಪ್ರೇಮವು ಈಮಾನಿನ ಭಾಗವಾಗಿದೆ ಮತ್ತು ಸ್ವತಂತ್ರ ಹೋರಾಟಗಾರನ್ನು ಸ್ಮರಿಸಿದರು .

ಜಾಹೀರಾತು

ಕಾರ್ಯಕ್ರಮದಲ್ಲಿ  ಇಬ್ರಾಹಿಂ(ಉಪಾಧ್ಯಕ್ಷರು, ನೂರುಲ್ ಹುದಾ ಜುಮಾ ಮಸ್ಜಿದ್  ಕಾರಾಜೆ  ಕಾರಾಜೆ), ಅನ್ಸಾರ್ ಕಾರಾಜೆ (ಅಧ್ಯಕ್ಸರು ,ಹಯಾತುಲ್ ಇಸ್ಲಾಂ ಯಾಂಗ್ ಮೆನ್ಸ್ ಕಾರಾಜೆ ), ಸದರ್ ಮುಹಲ್ಲಿಂ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು. ಅಬ್ದುಲ್ ಲತೀಫ್ ಹಾಜಿ (ಪ್ರದಾನ ಕಾರ್ಯದರ್ಶಿ ,ನೂರುಲ್ ಹುದಾ ಜುಮಾ ಮಸ್ಜಿದ್  ಕಾರಾಜೆ) ಕಾರ್ಯಕ್ರಮವನ್ನು ನೀರೂಪಿಸಿದರು .

ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರಾಜೆ

ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರಾಜೆ ಯೂನಿಟ್ ವತಿಯಿಂದ ಕಾರಾಜೆ ಜಂಕ್ಷನ್ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣ ನೆರವೇರಿಸಿ ಅಬ್ದುಲ್ ಮುಬಾರಕ್ ಕಾರಾಜೆ (ಕಾರ್ಯಕಾರಿ ಸಮಿತಿ ಸದಸ್ಯ ,ಪ್ರವಾಸಿ ಕಾರಾಜೆ) ಎಲ್ಲಾ ಸಂಧಿಗ್ನತೆ ಗಳನ್ನು, ಪ್ಯಾಶಿಸ್ಟ್ ಮನೋಸ್ಥಿತಿಯ ಎಲ್ಲ ರಿತೀಯ ಷಡ್ಯಂತ್ರಗಳನ್ನೂ ಮೆಟ್ಟಿ ನಿಂತು ಅಶಾಂತಿಯ ಮೂಲ ಬೇರಿಗೆ ಕೊಡಲಿಯೇಟು ಕೊಡುವಂತಹ ನಮ್ಮ ಸುಂದರ ಭಾರತ ದೇಶದಲ್ಲಿ ಶಾಂತಿಯನ್ನು ಭದ್ರವಾಗಿ ನೆಲೆ ನಿಲ್ಲಿಸಲು ಕೆಚ್ಚದೆಯಿಂದ ಹೋರಾಡುವ ಹೋರಾಟಗಾರರ ಮನೋಬಲದೊಂದಿಗೆ ಸ್ವಾತಂತ್ರವನ್ನು ಕಾಯುವ ಕಾವಲಾಳುಗಳು ಆಗಬೇಕೆಂದು ಹೇಳಿದರು.

ಜಾಹೀರಾತು

ಕಾರ್ಯಕ್ರಮದಲ್ಲಿ  ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರಾಜೆ ಯೂನಿಟ್  ಅಧ್ಯಕ್ಷ ಸಿರಾಜ್ ಕಾರಾಜೆ ಮತ್ತು ಮಹಮ್ಮೆದ್ ಕಾರಾಜೆ ( ಸಜೀಪ ಮೂಡ ಗ್ರಾಮ ಸಮಿತಿ ಸದಸ್ಯ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಓಫ್ ಇಂಡಿಯಾ)  ಉಪಸ್ಥಿತರಿದ್ದರು.

 ದಾರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ ಪಡ್ಪು

ದಾರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ ಪಡ್ಪುಇದರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಏನ್. ಕೆ. ಮೊಹಮ್ಮದ್ ಮುಸ್ಲಿಯಾರ್ (ಮಾಜಿ.ಖತೀಬರು) ರವರು ಮಸೀದಿ ವಠಾರದಲ್ಲಿ ನೆರವೇರಿಸಿದರು.ಮಸೀದಿಯ ಖತೀಬರಾದ ಝುಬೈರ್ ಅಝಅರಿ ದುಃಅ ದೊಂದಿಗೆ ಮಾತನಾಡಿ ಸ್ವಾತಂತ್ರಾ ಹೋರಾಟಗಾರನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಪಿ.ಕೆ. ಅಬ್ದುಲ್ ಕಾದರ್ ಹಾಜಿ , ಸಯ್ಯದ್ ಅಲಿ ಮುಸ್ಲಿಯಾರ್ , ಮಹಮ್ಮೆದ್ ಕಾರಾಜೆ ( ಸಜೀಪ ಮೂಡ ಗ್ರಾಮ ಸಮಿತಿ ಸದಸ್ಯ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಓಫ್ ಇಂಡಿಯಾ), ಶಂಸುಲ್ ಉಲಮಾ ಕ್ರಿಯಾ ಸಮಿತಿ ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ