ಬಂಟ್ವಾಳ

ಬಂಟ್ವಾಳ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ 20 ಕೋಟಿ ಮಂಜೂರು

2016-17ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಶೀರ್ಷಿಕೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕಾಗಿ 20 ಕೋಟಿ ರೂ.  ಅನುದಾನ ಮಂಜೂರು ಮಾಡಲಾಗಿದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
  ಬಂಟ್ವಾಳ ತಾಲೂಕು ಕಲ್ಲಡ್ಕ ವೀರಕಂಭ ರಾಜ್ಯ ಹೆದ್ದಾರಿ ದ್ವಿಪಥಗೊಳಿಸಲು ರೂ.3  ಕೋಟಿ, ಕೋಡಪದವು ಎಂಬಲ್ಲಿ ರಸ್ತೆ ಅಗಲೀಕರಣಗೊಳಿಸಲು ರೂ.1.00ಕೋಟಿ, ಬೈರಿಕಟ್ಟೆ – ಕನ್ಯಾನ ರಾಜ್ಯ  ಹೆದ್ದಾರಿ ನವೀಕರಣಕ್ಕೆ ರೂ.1.50 ಕೋಟಿ, ಕಾರಿಂಜ ಕ್ರಾಸ್ ಪಚ್ಚಾಜೆ –ಕೊಳೆಂಜಿ ಕೋಡಿ ಮತ್ತು ವಗ್ಗ – ಅಲ್ಲಿಪಾದೆ ರಸ್ತೆ ಅಭಿವೃದ್ಧಿಗೆ ರೂ.2.75 ಕೋಟಿ, ಮಜ್ಜೋಣಿ – ಮಾದಕಟ್ಟೆ – ಮದಕ – ಕರೈ ರಸ್ತೆ ಅಭಿವೃದ್ಧಿಗೆ ರೂ.2 ಕೋಟಿ, ಅನಂತಾಡಿ – ಮಂಗಿಲಪದವು ರಸ್ತೆ ಅಭಿವೃದ್ಧಿಗೆ ರೂ.95.00ಲಕ್ಷ, ವಗ್ಗ – ವಾಮದಪದವು ರಸ್ತೆ ಅಭಿವೃದ್ಧಿಗೆ ರೂ.95 ಲಕ್ಷ, ಬೇಡಗುಡ್ಡೆ – ಸುಂಕದಕಟ್ಟೆ – ಆನೆಕಲ್ಲು ರಸ್ತೆ ಅಭಿವೃಧ್ಧಿಗೆ ರೂ.95.00 ಲಕ್ಷ, ಪೆರಾಜೆ ಗ್ರಾಮದ ಬುಡೋಳಿ ಪೇಟೆ ಶೇರಾ ಶಾಲೆ – ಬನಾರಿ ರಸ್ತೆ ಅಭಿವೃದ್ಧಿಗೆ ರೂ.90 ಲಕ್ಷ.
  ಅಮ್ಟಾಡಿ–ಕುರಿಯಾಳ ರಸ್ತೆ ಅಭಿವೃದ್ಧಿಗೆ 80ಲಕ್ಷ, ಕೈಕಂಬ-ಪರ್ಲಿಯ ರಸ್ತೆ ಅಭಿವೃದ್ಧಿಗೆ ರೂ.50 ಲಕ್ಷ, ಕಾವಳಕಟ್ಟೆ-ಬಂಗೇರಕೆರೆ–ರಾಮೊಟ್ಟು ರಸ್ತೆ ಅಭಿವೃದ್ಧಿಗೆ ರೂ.25.00ಲಕ್ಷ, ಇರ್ನಿ – ಅಣ್ಣಳಿಕೆ ರಸ್ತೆ ಅಭಿವೃದ್ಧಿಗೆ ರೂ.20.00ಲಕ್ಷ, ಅಮ್ಟೂರು – ಕೇಶವನಗರ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ರೂ.1.50ಕೋಟಿ, ಪಾಣೆಮಂಗಳೂರು ಪಾತೂರು ರಸ್ತೆ ನವೀಕರಣ ಹಾಗೂ ಕಿರು ಸೇತುವೆ ಕಾಮಗಾರಿಗೆ ರೂ.85 ಲಕ್ಷ, ರಾಯಿ ಗ್ರಾಮದ ಹೊರಂಗಳ ಮಹಾಲಿಂಗೇಶ್ವರ ದೇವಸ್ಥಾನ ಕೂಡು ರಸ್ತೆಗೆ ಪಾಂಚಕೋಡಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ರೂ.30.00ಲಕ್ಷ, ಕಲ್ಲಗುಡ್ಡೆ – ಕಮ್ಮಾಜೆ – ಕಾವೇಶ್ವರ – ಪಡೀಲುಬೈಲು ರಸ್ತೆಗೆ ಕಾವೇಶ್ವರ ದೇವಸ್ಥಾನ ಬಳಿ ಸೇತುವೆ ನಿರ್ಮಾಣಕ್ಕೆ 25ಲಕ್ಷ, ಮಂಚಿ ಗ್ರಾಮದ ಮಿತ್ತಲ ಕ್ರಾಸ್, ಪಂಜಳ – ಕಜೆ ರಸ್ತೆಗೆ ಪಂಜಳ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 15.00ಲಕ್ಷ, ಸಾಲೆತ್ತೂರು – ಪಡೆಕುಂಜ ರಸ್ತೆಯ ಬದಿ ರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ 40 ಲಕ್ಷ, ಹಾಗೂ ಮಂಚಿ ಕೋಕಳ – ಕಲ್ಕಾರು ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ 80.00 ಲಕ್ಷ ರೂ. ಅನುದಾನ ಮಂಜೂರಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ