ಬಂಟ್ವಾಳ

ಧಾರಾಕಾರ ಮಳೆಗೆ ಮುಳುಗಿದ ರಾಷ್ಟ್ರೀಯ ಹೆದ್ದಾರಿ

ರಸ್ತೆ ಪಕ್ಕ ಚರಂಡಿ ಹೂಳೆತ್ತದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ. ಇದುವರೆಗೆ ಬಂದ ಮಳೆಗೆ ಪಾಠ ಕಲಿಯದ ಇಲಾಖೆಗಳಿಗೆ ಶಾಕ್ ಟ್ರೀಟ್ಮೆಂಟ್ ನೀಡಲು ಧಾರಾಕಾರ ಮಳೆಯೇ ಬರಬೇಕಾಯಿತು. ಆದರೆ ಇಲ್ಲಿ ತೊಂದರೆ ಅನುಭವಿಸಿದ್ದು ನಾಗರಿಕರು.

ಏನಾಯಿತು:

ಜಾಹೀರಾತು

ಶನಿವಾರ ಬೆಳಗ್ಗಿನಿಂದಲೇ ಬಿ.ಸಿ.ರೋಡ್ ನಲ್ಲಿ ಧಾರಾಕಾರ ಮಳೆ. ಕೈಕಂಬ ಬಳಿ ಬಸ್ ಬೇ ಗೆಂದು ರಸ್ತೆ ಅಗೆದ ಬಳಿಕ ಸಮರ್ಪಕ ಕಾಮಗಾರಿ ನಡೆದೇ ಇರಲಿಲ್ಲ. ಹೀಗಾಗಿ ರಸ್ತೆ ಬದಿ ಅಗೆದ ಮಣ್ಣು ರಾಶಿ ಬಿದ್ದ ಪರಿಣಾಮ, ಮಳೆ ನೀರು ಚರಂಡಿಗೆ ಹರಿದು ಹೋಗಲು ಅವಕಾಶವೇ ಸಿಗಲಿಲ್ಲ. ಹೀಗಾಗಿ ರಸ್ತೆಯೇ ಹೊಳೆಯಾಯಿತು.

Pic: Kishore Peraje

ಜಾಹೀರಾತು

ಸುಮಾರು ಒಂದೂವರೆ ತಾಸಿಗೂ ಅಧಿಕ ಕಾಲ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಇದೇ ಹೊತ್ತಿನಲ್ಲಿ ಘನ ವಾಹನಗಳು ಹೋಗುವಾಗ ದ್ವಿಚಕ್ರ ವಾಹನ ಸವಾರರು ಈ ಕೆಸರು ನೀರಿನ ಸ್ನಾನ ಮಾಡಬೇಕಾಯಿತು. ನೋಡನೋಡುತ್ತಿದ್ದಂತೆ ನೀರು ಜಾಸ್ತಿಯಾಗತೊಡಗಿತು. ಬಳಿಕ ಜೆಸಿಬಿ ತರಿಸಿ ರಸ್ತೆ ಬದಿ ರಾಶಿ ಹಾಕಲಾದ ಮಣ್ಣನ್ನು ಪಕ್ಕಕ್ಕೆ ಸರಿಸಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಯಿತು.

ಇದನ್ನೇ ವಾರದ ಮೊದಲೇ ಮಾಡಬಹುದಿತ್ತಲ್ವೇ ಎಂದು ಗೊಣಗುತ್ತಾ ನಾಗರಿಕರು ಸಂಚಾರ ಮುಂದುವರಿಸಿದರು.

ಜಾಹೀರಾತು

Also Read:

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ