ಬಂಟ್ವಾಳ

ಸ್ವಚ್ಛ ಬಂಟ್ವಾಳ ಆಂದೋಲನದಡಿ ಪರಿಸರ ಜಾಗೃತಿ ಕಾರ್ಯಾಗಾರ

ಬಂಟ್ವಾಳ  ಪುರಸಭೆ  , ಲಯನ್ಸ್ ಕ್ಲಬ್  ಬಂಟ್ವಾಳ, ಸ್ವಚ್ಛ ಬಂಟ್ವಾಳ ಮತ್ತು ಟೀಮ್ ವಿವೇಕ್ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  ವಿಶ್ವ  ಪರಿಸರ ದಿನವನ್ನು ಆಚರಿಸಲಾಯಿತು.

ಜಾಹೀರಾತು

ರಾಮಕೃಷ್ಣ  ಮಿಷನ್  ಸ್ವಚ್ಛ  ಬಂಟ್ವಾಳ ಆಂದೋಲನದಡಿಯಲ್ಲಿ  ಪರಿಸರ ಜಾಗೃತಿ  ಕಾರ್ಯಾಗಾರವನ್ನು  ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ  ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ರಾಮಕೃಷ್ಣ  ಮಠದ ಸ್ವಾಮಿ  ಧರ್ಮವ್ರತಾನಂದ ಜಿ ಮಾತನಾಡುತ್ತಾ   ಸ್ವಚ್ಛತೆ  ಎಂಬುದು  ವೈಯ್ಯಕ್ತಿಕ  ಮಟ್ಟದಲ್ಲಿ  ಪ್ರಾರಂಭವಾಗಬೇಕು  ಮತ್ತು ಜೀವಂತವಾಗಬೇಕು. ಸ್ವಚ್ಛತೆ ನಮ್ಮ  ಜವಾಬ್ದಾರಿ  ಎಂಬುದನ್ನು ಮರೆತಿರುವುದಕ್ಕೆಯೇ  ಇಂದು  ಪ್ರಧಾನಿಗಳು ಸ್ವಚ್ಛತೆಯನ್ನು ಅಭಿಯಾನದಂತೆ  ಕೈಗೆತ್ತಿಕೊಂಡಿದ್ದಾರೆ  ಮತ್ತು ಅದಕ್ಕೆ  ರಾಮಕೃಷ್ಣ ಮಠ ಸಾಥ್  ನೀಡುತ್ತಾ  ಬಂದಿದೆ  . ಗ್ರಾಮೀಣ  ಮಟ್ಟದಿಂದಲೇ ಆಡಳಿತಾತ್ಮಕವಾಗಿ  ಕಠಿಣ  ನಿಯಮಾವಳಿಗಳನ್ನು  ಜಾರಿಗೊಳಿಸಿದರೆ  ಸ್ವಚ್ಛ ಭಾರತ  ಕನಸ್ಸನ್ನು  ನನಸಾಗಲು  ಸಾಧ್ಯ  . ಆದ್ದರಿಂದ  ನಾವೆಲ್ಲರೂ ಸ್ವಚ್ಛತೆ ನಮ್ಮ ಕರ್ತವ್ಯವೆಂದು  ತಿಳಿದು  ದೇಶವನ್ನು  ಸ್ವಚ್ಛವಾಗಿಡಲು ದಿಟ್ಟ  ಹೆಜ್ಜೆ  ಇಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಸಂಪನ್ಮೂಲ  ವ್ಯಕ್ತಿಯಾಗಿ  ಆಗಮಿಸಿದ ರಾಷ್ಟೀಯ  ಪರಿಸರ ಸಂರಕ್ಷಣಾ ಒಕ್ಕೂಟದ  ಕಾರ್ಯದರ್ಶಿಗಳಾದ  ಶಶಿಧರ  ಶೆಟ್ಟಿ  ಮಾತನಾಡಿ  ಪಶ್ಚಿಮ  ಘಟ್ಟಗಳ  ಪ್ರಾಮುಖ್ಯತೆ  ಮತ್ತು ಅದರ  ಉಳಿವಿಗಾಗಿ  ಅಗತ್ಯವಿರುವ  ಹೋರಾಟದ  ಬಗ್ಗೆ ಸೂಕ್ಷ್ಮವಾಗಿ  ವಿವರಿಸಿದರು.

ಜಾಹೀರಾತು

ಬಿ.ಮೂಡ  ಪದವಿ  ಪೂರ್ವ  ಕಾಲೇಜಿನ ಉಪನ್ಯಾಸಕ  ರಜಾಕ್  ಮಾತನಾಡಿ  ನೀರಿನ  ಮಿತಯುತ ಬಳಕೆಯ  ಅವಶ್ಯಕತೆಯ  ಬಗ್ಗೆ ಮತ್ತು ಪುರಸಭೆ ಆಯೋಜಿಸಿದ್ದ  ನಿರ್ಮಲ  ಬಂಟ್ವಾಳ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಪುರಸಭೆ ಅಧ್ಯಕ್ಷರಾದ  ರಾಮಕೃಷ್ಣ  ಆಳ್ವ  ಅಧ್ಯಕ್ಷೀಯ ನುಡಿಗಳಾಡಿದರು . ಬಂಟ್ವಾಳ ನಗರಾಭಿವೃದ್ಧಿ  ಪ್ರಾಕಾರದ  ಅಧ್ಯಕ್ಷ ಸದಾಶಿವ ಬಂಗೇರ, ಮುಖ್ಯಾಕಾರಿ ಎಂ.ಎಚ್.ಸುಧಾಕರ್, ಉಪನ್ಯಾಸಕ ಪ್ರೊ. ತುಕರಾಮ್ ಪೂಜಾರಿ, ಸುಂದರ್ ರಾವ್, ರಾಜಶೇಖರ್ ಹೆಬ್ಬಾರ್, ಸುರೇಂದ್ರ ಶಣ್ಯ , ವಿನಾಯಕ್ ಪೈ, ಅರ್ಜುನ್ ಪೈ, ವಿವಿದ  ಸಂಘಟನೆಗಳ ಪದಾಕಾರಿಗಳು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ